Advertisement

ವಕೀಲರ ಮೇಲೆ ಪೋಲಿಸ್‌ ಹಲ್ಲೆಗೆ ಖಂಡನೆ

12:25 PM Nov 05, 2019 | Team Udayavani |

ದಾವಣಗೆರೆ: ದೆಹಲಿಯ ವಕೀಲರ ಮೇಲೆ ಪೊಲೀಸರು ಹಲ್ಲೆ  ನಡೆಸಿರುವುದನ್ನು ಖಂಡಿಸಿ ಸೋಮವಾರ ವಕೀಲರು ಪ್ರತಿಭಟನೆ ನಡೆಸಿದರು.

Advertisement

ದೆಹಲಿಯಲ್ಲಿ ವಕೀಲರ ಮೇಲೆ ಪೊಲೀಸರು ಅಮಾನವೀಯ ರೀತಿಯಲ್ಲಿ ಹಲ್ಲೆ ನಡೆಸುವ ಮೂಲಕ ಕಾನೂನು ಕೈಗೆತ್ತಿಕೊಂಡಿರುವುದು ಸರಿಯಲ್ಲ. ಕೇಂದ್ರ ಸರ್ಕಾರ ಹಾಗೂ ಕಾನೂನು ಸಚಿವರು ಸೂಕ್ತ ಕ್ರಮ ಕೈಗೊಳ್ಳಬೇಕು. ವಕೀಲರ ಮೇಲೆ ನಡೆಯುತ್ತಿರುವ ಹಲ್ಲೆಯನ್ನು ತಡೆಗಟ್ಟಬೇಕು ಎಂದು ವಕೀಲರು ಒತ್ತಾಯಿಸಿದರು.

ವಕೀಲರ ರಕ್ಷಣೆಯ ಬಗ್ಗೆ ಕಾಯ್ದೆ ಜಾರಿಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ವಕೀಲರಿಗೆ ರಕ್ಷಣೆ ನೀಡಲು ಸೂಚಿಸಬೇಕು. ಕಾನೂನು ಉಲ್ಲಂಘನೆ ಮಾಡಿರುವ ಪೊಲೀಸರನ್ನು ತಕ್ಷಣವೇ ಕೆಲಸದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಗೆ ಮುನ್ನ ಜಿಲ್ಲಾ ವಕೀಲರ ಸಭಾಂಗಣದಲ್ಲಿ ಸಭೆ ನಡೆಸಿ, ದೆಹಲಿ ಪೊಲೀಸರ ವರ್ತನೆ ಖಂಡಿಸಿದರು.

ನಂತರ ಜಿಲ್ಲಾಡಳಿತದ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ವಕೀಲರ ಸಂಘದ ಜಿಲ್ಲಾ ಅಧ್ಯಕ್ಷ ಎನ್‌.ಟಿ. ಮಂಜುನಾಥ್‌, ಪ್ರಧಾನ ಕಾರ್ಯದರ್ಶಿ ಎಚ್‌. ದಿವಾಕರ್‌, ಕಾರ್ಯದರ್ಶಿ ಬಿ.ಎಸ್‌. ಲಿಂಗರಾಜ್‌, ಸಹ ಕಾರ್ಯದರ್ಶಿ ಎಸ್‌. ಬಸವರಾಜ್‌, ಉಚ್ಚಂಗಿದುರ್ಗದ ಬಸವರಾಜ್‌, ಎನ್‌.ಎಂ. ಆಂಜನೇಯ ಗುರೂಜಿ, ನಜೀರ್‌ ಅಹಮದ್‌ ,ರಜ್ವಿ ಖಾನ್‌,ಪ್ರದೀಪ್‌, ಶ್ಯಾಮ್‌,ಅನೀಸ್‌ ಪಾಷಾ, ಗಂಗಾಧರ ನಾಯ್ಕ,ವಿನಯ್‌ ಕುಮಾರ್‌, ಅಬ್ದುಲ್‌ ಖಾದರ್‌, ಗಣೇಶ್‌ ಕುಮಾರ್‌, ಎಸ್‌.ಎನ್‌. ಸದಾಶಿವ ಇತರರು ಇದ್ದರು. ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ ನಂತರ ಕಾರ್ಯಕಲಾಪಗಳಿಂದ ದೂರ ಉಳಿದರು.

Advertisement

Udayavani is now on Telegram. Click here to join our channel and stay updated with the latest news.

Next