Advertisement

ಭರದಿಂದ ಸಾಗುತ್ತಿದೆ ಕಾಂಕ್ರೀಟ್ ರಸ್ತೆ ಕಾಮಗಾರಿ

12:12 AM Jul 01, 2019 | Team Udayavani |

ಕೋಟೇಶ್ವರ: ಮಳೆಗಾಲದಲ್ಲಿ ನೀರುನಿಂತು ಅವ್ಯವಸ್ಥೆ ಉಂಟಾಗಿದ್ದ ಕೋಟೇಶ್ವರ-ಹಾಲಾಡಿ ಸಾಗುವ ಮುಖ್ಯರಸ್ತೆಯ ಕಾಂಕ್ರೀಟ್ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು ಮುಕ್ತ ವಾಹನ ಸಂಚಾರಕ್ಕೆ ಸಿದ್ದವಾಗುತ್ತಿದೆ.

Advertisement

ಕಳೆದ ಹಲವು ವರ್ಷಗಳಿಂದ 2 ಕಿ.ಮೀ. ದೂರ ವ್ಯಾಪ್ತಿವರೆಗಿನ ಈ ಮಾರ್ಗವು ಮಳೆಗಾಲದಲ್ಲಿ ನೀರಿನ ಹೊರ ಹರಿವಿಗೆ ಸರಿಯಾದ ವ್ಯವಸ್ಥೆಯಿಲ್ಲದೆ ಕೃತಕ ನೆರೆಹಾವಳಿಗೆ ತುತ್ತಾಗಿತ್ತು. ಇಲ್ಲಿನ ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಿದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಸರಕಾರದ ಅನುದಾನ ಬಿಡುಗಡೆ ಮಾಡುವುದರ ಮೂಲಕ ಬೇಡಿಕೆ ಈಡೇರಿಸಿದಂತಾಗಿದೆ. ಲೋಕೊಪಯೋಗಿ ಇಲಾಖೆಯ ವತಿಯಿಂದ ಮುಂದುವರಿದ ಎರಡು ಕೋಟಿ ರೂ. ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುತ್ತಿದ್ದು ಮುಂದಿನ 15 ದಿನದೊಳಗೆ ಮುಕ್ತವಾಹನ ಸಂಚಾರಕ್ಕೆ ಅನುವು ಮಾಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next