Advertisement

ಬನಹಟ್ಟಿ : ಕಾರ್ಮಿಕ ಮುಖಂಡ, ಕಾಮ್ರೇಡ್ ಮಲ್ಲಪ್ಪ ಜುಮನಾಳ ಕೋವಿಡ್‌ಗೆ ಬಲಿ

06:24 PM May 08, 2021 | Team Udayavani |

ಬನಹಟ್ಟಿ : ಸ್ಥಳೀಯ ನೇಕಾರ ಕಾರ್ಮಿಕ ಮುಖಂಡ ಮಲ್ಲಿಕಾರ್ಜುನ ಜುಮನಾಳ(72) ಕೋವಿಡ್ ಸೋಂಕಿನಿಂದ ನಿಧನರಾದರು.

Advertisement

ಕಾಮ್ರೇಡ್ ಮಲ್ಲಪ್ಪ ಜುಮನಾಳ ಎಂದೇ ಪ್ರಸಿದ್ದಿ ಪಡೆದ ಮಲ್ಲಿಕಾರ್ಜುನ ಜುಮನಾಳ ಅವರು ಮೂಲತಃ ಇಂಡಿ ಭಾಗದವರಾದರೂ, ಬನಹಟ್ಟಿಯನ್ನು ತಮ್ಮ ಸೇವಾ ಕ್ಷೇತ್ರದ ಕೇಂದ್ರವಾಗಿಸಿಕೊಂಡು ಕಳೆದ ನಲ್ವತ್ತು ವರ್ಷಕ್ಕೂ ಹೆಚ್ಚುಕಾಲ ಎ.ಐ.ಟಿ.ಯು.ಸಿ. ಕಾರ್ಯಕರ್ತರಾಗಿ, ಆಜನ್ಮ ಬ್ರಹ್ಮಚಾರಿಯಾಗಿಯೇ ಉಳಿದ ಅವರು ತಮಗಿದ್ದ ಆಸ್ತಿಯ ಪಾಲನ್ನೂ ಸೋದರರಿಗೇ ಬಿಟ್ಟವರು.

1975 ರ ಸುಮಾರಿಗೆ ಸ್ನಾತಕೋತ್ತರ ಪದವಿಯನ್ನು ಪಡೆದ ಜುಮನಾಳ ಎ.ಐ.ಟಿ.ಯು.ಸಿ. ಸೇರಿ ಕಾರ್ಮಿಕರ ಸಂಘಟನೆ, ಹೋರಾಟಗಳಲ್ಲೇ ಬದುಕು ಸವೆಸಿದರು.

ಇದನ್ನೂ ಓದಿ:ಆಕ್ಸಿಜನ್‌-ರೆಮ್‌ಡಿಸಿವರ್‌ ಮಿತವಾಗಿ ಬಳಸಿ  : ಜಿಲ್ಲಾಧಿಕಾರಿ ಎಂ.ಸುಂದರೇಶ್‌ ಬಾಬು

ಕಳೆದ 23 ದಿನಗಳಿಂದ ಕೋವಿಡ್ ವಿರುದ್ದ ಸೆಣೆಸಿ, ಇಂದು ಜಮಖಂಡಿಯ ಆಸ್ಪತ್ರೆಯಲ್ಲಿ ನಿಧನರಾದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next