Advertisement

Mangaluru ವಿಮಾನದ ಚೆಕ್‌-ಇನ್‌ ಸಿಬಂದಿ ವಿರುದ್ದ ಗ್ರಾಹಕ ಪರಿಹಾರ ಆಯೋಗಕ್ಕೆ ದೂರು

12:40 AM Apr 06, 2024 | Team Udayavani |

ಮಂಗಳೂರು: ವಿಮಾನದ ಚೆಕ್‌-ಇನ್‌ ಸಿಬಂದಿ ದುರ್ವರ್ತನೆ ತೋರಿದ್ದಾರೆ ಎಂದು ಆರೋಪಿಸಿ ಮೂಡುಬಿದಿರೆ ನಿವಾಸಿ ಝುಬೈರ್‌ ಶೇಕ್‌ ಅವರು ಕರ್ನಾಟಕ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಬುಧವಾರ ದೂರು ನೀಡಿದ್ದಾರೆ.

Advertisement

ಅವರ ಪತ್ನಿ ಮತ್ತು ಮೂವರು ಮಕ್ಕಳು ದುಬಾೖಗೆ ಪ್ರಯಾಣಿಸಲು ಬೆಳಗ್ಗೆ 6.35ಕ್ಕೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಬೆಳಗ್ಗೆ 7.55ಕ್ಕೆ ವಿಮಾನ ಹೊರಡಲಿತ್ತು. ವಿಮಾನದಲ್ಲಿ ಪ್ರಯಾಣಕ್ಕೆ ಮೊದಲು ಎಲ್ಲ ಪ್ರಕ್ರಿಯೆಗಳು ಮುಗಿದ ಬಳಿಕ ಚೆಕ್‌-ಇನ್‌ ಸಿಬಂದಿ ತಮ್ಮ ಬ್ಯಾಗ್‌ನ್ನು ಹೆಚ್ಚುವರಿಯಾಗಿ ಪ್ಯಾಕ್‌ ಮಾಡುವಂತೆ ನಿರ್ದೇಶಿಸಿದರು.

ಸಿಬಂದಿ ಹೇಳಿದನ್ನು ಅನುಸರಿಸಿ ಲಗೇಜ್‌ ಅನ್ನು ಪ್ಯಾಕ್‌ ಮಾಡಿ ಮರಳಿದಾಗ ಅವರಿಗೆ ವಿಮಾನದಲ್ಲಿ ತೆರಳಲು ಅವಕಾಶ ನಿರಾಕರಿಸಲಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಆ ವಿಮಾನವು ಮುಂಬಯಿಗೆ ಸಂಪರ್ಕಿಸಿ, ಅಲ್ಲಿಂದ ಮತ್ತೊಂದು ವಿಮಾನದ ಮೂಲಕ ದುಬಾೖಗೆ ತೆರಳಬೇಕಿತ್ತು. ಆದರೆ ತಮಗೆ ಪ್ರಯಾಣಿಸಲು ಅಸಾಧ್ಯವಾಗಿದೆ ಎಂದು ಅವರು ದೂರಿನಲ್ಲಿ ಉಲ್ಲೇಖೀಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next