Advertisement

ಬಸ್ಕಿ  ಹೊಡೆಸಿದ ಶಿಕ್ಷಕಿ ವಿರುದ್ಧ ದೂರು

09:31 AM Dec 16, 2018 | |

ಶಿವಮೊಗ್ಗ: ತಮ್ಮ ಮಗ ಗಲಾಟೆ ಮಾಡುತ್ತಿದ್ದ ಎಂಬ ಕಾರಣಕ್ಕೆ ಶಿಕ್ಷಕಿಯೊಬ್ಬರು 100 ಬಸ್ಕಿ ಹೊಡೆಸಿದ್ದಲ್ಲದೆ,
ಬೆನ್ನಿನ ಮೇಲೆ ಗುದ್ದಿದ್ದಾರೆ. ದೂರು ದಾಖಲಿಸಿಕೊಳ್ಳಲು ಪೊಲೀಸರು ವಿಳಂಬ ಮಾಡುತ್ತಿದ್ದಾರೆಂದು ಆರೋಪಿಸಿ ಪೋಷಕರು ಶನಿವಾರ ಜಯನಗರ ಠಾಣೆ ಮುಂದೆ ಪ್ರತಿಭಟನೆ ನಡೆಸಿದರು.

Advertisement

ಜೆ.ಎಚ್‌.ಪಟೇಲ್‌ ಬಡಾವಣೆಯ ಸಂಜೀವ್‌ ಹಾಗೂ ಸಂಗೀತಾ ದಂಪತಿ ಪುತ್ರ, ನಗರದ ದುರ್ಗಿಗುಡಿ ಸರಕಾರಿ
ಶಾಲೆಯಲ್ಲಿ 3ನೇ ತರಗತಿ ಓದುತ್ತಿದ್ದಾನೆ. ಶಿಕ್ಷಕಿ ಕನ್ಯಾಕುಮಾರಿ ಎಂಬುವರು ಈತ ಗಲಾಟೆ ಮಾಡುತ್ತಿದ್ದ ಎಂಬ ಕಾರಣಕ್ಕೆ 100 ಬಸ್ಕಿ ಹೊಡೆಸಿ, ಶಿಕ್ಷೆಯ ರೂಪದಲ್ಲಿ ಬೆನ್ನಿನ ಮೇಲೆ ಗುದ್ದಿದ್ದಾರೆ. ಇದರಿಂದ ಏಳಲು, ಕೂರಲು, ಬಗ್ಗಲು ಆತನಿಗೆ ಕಷ್ಟವಾಗಿದ್ದು, ಖಾಸಗಿ ಹಾಗೂ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.

ಈಗ ಆತ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾನೆ. ಈ ಮಧ್ಯೆ, ಶಿಕ್ಷಕಿ ವಿರುದ್ಧ ದೂರು ದಾಖಲಿಸಲು ಶುಕ್ರವಾರ ಜಯನಗರ ಪೊಲೀಸ್‌ ಠಾಣೆಗೆ ತೆರಳಿದ್ದ ಪೋಷಕರಿಗೆ ಪೊಲೀಸರು ನಾಳೆ ಬರುವಂತೆ ಹೇಳಿ ಕಳುಹಿಸಿದ್ದರು. ಶನಿವಾರ ದೂರು ನೀಡಲು ಬಂದ ಪೋಷಕರ ಬಳಿ ಪೊಲೀಸರು ಕೋರ್ಟ್‌ ಅನುಮತಿ ಪತ್ರ ನೀಡುವಂತೆ ಕೇಳಿದರು. ಇದರಿಂದ ಆಕ್ರೋಶಗೊಂಡ ಸಂಜೀವ್‌ ದಂಪತಿ, ಠಾಣೆ ಎದುರುಶನಿವಾರ ಪ್ರತಿಭಟನೆಗಿಳಿದರು. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಹಿರಿಯ ಪೊಲೀಸ್‌ ಅಧಿಕಾರಿಗಳು ಹಾಗೂ ಮಕ್ಕಳ ಹಕ್ಕು ರಕಣಾ ಸಮಿತಿ ಅಧ್ಯಕ್ಷೆ ರೇಖಾ ಜಿ.ಎಂ ಸೂಚನೆ ಮೇರೆಗೆ ಜಯನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬಳಿಕ, ಸಂಜೀವ್‌ ದಂಪತಿ
ಪ್ರತಿಭಟನೆ ಅಂತ್ಯಗೊಳಿಸಿದ್ದು, ಶಿಕ್ಷೆ ವಿಧಿಸಿದ ಶಿಕಕಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next