Advertisement

ಶ್ರೀರಾಮುಲು ವಿರುದ್ಧ ದೂರು

06:40 AM Aug 02, 2018 | |

ಬೆಂಗಳೂರು: ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡಬೇಕೆಂದು ವಿವಾದಾತ್ಮಕ ಹೇಳಿಕೆ ನೀಡಿರುವ ಶಾಸಕ
ಬಿ.ಶ್ರೀರಾಮುಲು ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕನ್ನಡ ಅನುಷ್ಠಾನ ಮಂಡಳಿ ಸದಸ್ಯರು ಮಲ್ಲೇಶ್ವರ ಪೊಲೀಸ್‌
ಠಾಣೆಯಲ್ಲಿ ಬುಧವಾರ ದೂರು ದಾಖಲಿಸಿದ್ದಾರೆ.

Advertisement

ರಾಜ್ಯ ಪುನರ್‌ ರಚನೆ ಕಾಯ್ದೆ ಪ್ರಕಾರ ರಾಜ್ಯದ ಜನಪ್ರತಿನಿಧಿಗಳು ಅಖಂಡ ಕರ್ನಾಟಕದ ಅಭಿವೃದ್ಧಿಗೆ, ಏಕತೆಗೆ ಧಕ್ಕೆ ತರಬಾರದು. ಕರ್ನಾಟಕವನ್ನು ಒಡೆದು ಪ್ರತ್ಯೇಕ ರಾಜ್ಯ ಮಾಡುವ ಕುರಿತು ಕನ್ನಡಿಗರನ್ನು ಪ್ರಚೋದಿಸಬಾರದು. ಆದರೆ, ಶಾಸಕ ಶ್ರೀರಾಮುಲು ಅವರು ಜು.27ರಂದು ಬಳ್ಳಾರಿಯಲ್ಲಿ ತೆಲಂಗಾಣ ಮಾದರಿಯಲ್ಲಿ ಪ್ರತ್ಯೇಕ ಉತ್ತರ ಕರ್ನಾಟಕ ರಚನೆ ಮಾಡಬೇಕು ಎಂದು ಕರೆ ಕೊಡುವ ಮೂಲಕ ಕನ್ನಡಿಗರನ್ನು ಪ್ರಚೋದಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸಂವಿಧಾನದ ವಿರುದ್ಧವಾಗಿ ಹೇಳಿಕೆ ನೀಡಿದ್ದ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next