Advertisement

Bollywood: ಹಿಂದೂಗಳ ಭಾವನೆಗಳಿಗೆ ಧಕ್ಕೆ ಆರೋಪ- ರಣಬೀರ್‌ ವಿರುದ್ಧ ದೂರು

08:41 PM Dec 28, 2023 | Team Udayavani |

ಮುಂಬೈ: ಹಿಂದೂಗಳ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ ಆರೋಪದ ಮೇಲೆ ಬಾಲಿವುಡ್‌ ನಟ ರಣಬೀರ್‌ ಕಪೂರ್‌, ಕುಟುಂಬದವರ ವಿರುದ್ಧ ಮುಂಬೈನಲ್ಲಿ ದೂರು ದಾಖಲಾಗಿದೆ.
ಕುಟುಂಬದೊಂದಿಗೆ ಕ್ರಿಸ್‌ಮಸ್‌ ಸಂಭ್ರದ ವಿಡಿಯೋ ಅನ್ನು ಇನ್ಸ್‌ಸ್ಟಾಗ್ರಾಮ್‌ನಲ್ಲಿ ರಣಬೀರ್‌ ಹಂಚಿಕೊಂಡಿದ್ದರು. ಅದರಲ್ಲಿ ಕೇಕ್‌ ಮೇಲೆ ಜಹಾನ್‌ ಕಪೂರ್‌ ವೈನ್‌ ಸುರಿಯುತ್ತಾರೆ. ಅದಕ್ಕೆ ರಣಬೀರ್‌ ಕಪೂರ್‌ ಬೆಂಕಿ ಹಚ್ಚಿ, “ಜೈ ಮಾತಾ ದೀ” ಎಂದು ಘೋಷಣೆ ಕೂಗುತ್ತಾರೆ.

Advertisement

ಕ್ರೈಸ್ತ ಮತದ ಹಬ್ಬದ ವೇಳೆ ಕೇಕ್‌ ಮೇಲೆ ವೈನ್‌ ಸುರಿದು, ಬೆಂಕಿ ಹಚ್ಚವ ವೇಳೆ “ಜೈ ಮಾತಾ ದೀ” ಎಂದು ಘೋಷಣೆ ಕೂಗಿರುವುದು ನೋವುಂಟು ಮಾಡಿದೆ. ಹಿಂದೂಗಳು ಅಗ್ನಿಯನ್ನು ಪೂಜಿಸುತ್ತಾರೆ ಎಂದು ‌ಕೀಲರಾದ ಆಶಿಶ್‌ ರೈ ಮತ್ತು ಪಂಕಚ್‌ ಮಿಶ್ರಾ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next