Advertisement

ಜೀವ ಬೆದರಿಕೆ: ಸಚಿವ ಆನಂದ ಸಿಂಗ್‌ ಸಹಿತ ನಾಲ್ವರ ವಿರುದ್ಧ ದೂರು

10:00 PM Sep 01, 2022 | Team Udayavani |

ಹೊಸಪೇಟೆ: ಜೀವ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿ ಸಚಿವ ಆನಂದ ಸಿಂಗ್‌ ಸಹಿತ ನಾಲ್ವರ ವಿರುದ್ಧ ನಗರದ ಗ್ರಾಮೀಣ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ. ಆನಂದ ಸಿಂಗ್‌ ಅವರು ನನ್ನ ಮನೆಯನ್ನು ಕುಟುಂಬ ಸದಸ್ಯರೊಂದಿಗೆ  ಸುಟ್ಟು ಹಾಕುತ್ತೇನೆ ಎಂದು ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿ, ನಗರದ ಪೋಲಪ್ಪ ಎಂಬವರು ಕುಟುಂಬ ಸದಸ್ಯರೊಂದಿಗೆ ಎಸ್‌ಪಿ ಕಚೇರಿ ಎದುರು ಮಂಗಳವಾರ ಮೈ ಮೇಲೆ ಪೆಟ್ರೋಲ್‌ ಸುರಿದು  ಆತ್ಮಹತ್ಯೆಗೆ ಯತ್ನಿಸಿದ್ದರು.

Advertisement

ಆರೋಪ ಸತ್ಯಕ್ಕೆ ದೂರ: ಸಿಂಗ್‌:

ಈ ಕುರಿತು ಪ್ರತಿಕ್ರಿಯಿಸಿರುವ ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌, ನನ್ನ ಮೇಲೆ ಕೇಳಿ ಬಂದಿರುವ ಆರೋಪ ಸತ್ಯಕ್ಕೆ ದೂರವಾಗಿದೆ. ನಾನು ಪೋಲಪ್ಪ ಕುಟುಂಬಕ್ಕೆ ಯಾವುದೇ  ಬೆದರಿಕೆ ಹಾಕಿಲ್ಲ. ಅವರು ನೀಡಿದ ದೂರಿನ ಆಧಾರದಲ್ಲಿ ನನ್ನ ಮೇಲೆ ಪ್ರಕರಣ ದಾಖಲಾಗಿದೆ. ಈ ಕುರಿತು ಪೊಲೀಸ್‌  ತನಿಖೆ ನಡೆಯಲಿ. ನನ್ನ ತಪ್ಪಿದ್ದರೆ ಕಾನೂನು ಪ್ರಕಾರ ಶಿಕ್ಷೆಯಾಗಲಿ ಎಂದರು.

ಜಾಗದ ವಿಚಾರವಾಗಿ ದೌರ್ಜನ್ಯ: ಪೋಲಪ್ಪ:

ವಿಜಯನಗರ ಕ್ಷೇತ್ರದಲ್ಲಿ  ಆನಂದ ಸಿಂಗ್‌  ವಿರುದ್ಧ ಧ್ವನಿ ಎತ್ತಿದವರನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ. ಜಾಗದ ವಿಚಾರವಾಗಿ ನಮ್ಮ ಮೇಲೆ ದೌರ್ಜನ್ಯ ಮಾಡಲಾಗುತ್ತಿದೆ.  ಸಚಿವರ ವಿರುದ್ಧ  ಪೊಲೀಸ್‌ ಠಾಣೆಗೆ ದೂರು ನೀಡಲು ಹೋದಾಗ ತಡೆಯೊಡ್ಡಿದ್ದಾರೆ.  ನಮಗೆ ರಕ್ಷಣೆ ನೀಡಬೇಕು ಎಂದು ಪೋಲಪ್ಪ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next