Advertisement

ಪರಿಹಾರ ವಿಳಂಬ : ಎಸಿ ಕಚೇರಿ ಜಪ್ತಿ ಮಾಡಿದ ರೈತರು

08:55 AM Sep 19, 2019 | Sriram |

ಧಾರವಾಡ :ಸ್ವಾಧೀನ ಪಡಿಸಿಕೊಂಡ ಭೂಮಿಯ ರೈತರಿಗೆ ಪರಿಹಾರ ನೀಡಲು ವಿಳಂಬ ಮಾಡಿದ ಹಿನ್ನೆಲೆಯಲ್ಲಿ ಇಲ್ಲಿನ ಉಪ ವಿಭಾಗಾಧಿಕಾರಿ ಕಚೇರಿಯನ್ನು ಎರಡನೇ ಹೆಚ್ಚುವರಿ ದಿವಾಣಿ ನ್ಯಾಯಾಲಯದ ಆದೇಶದ ಮೇರೆಗೆ ರೈತರು ಜಪ್ತಿ ಮಾಡಿದ ಪ್ರಸಂಗ ಬುಧವಾರ ನಡೆಯಿತು.

Advertisement

ಕಲಘಟಗಿ ತಾಲ್ಲೂಕಿನ ತಬಕದಹೊನ್ನಳ್ಳಿ ಕೆರೆಯಿಂದ ಜಿನ್ನೂರ ಕೆರೆ ಪೂರಕ ಕಾಲುವೆ ನಿರ್ಮಾಣ ಸಲುವಾಗಿ ತಬಕದಹೊನ್ನಳ್ಳಿ, ಮಲಕನಕೊಪ್ಪ ಕೆರೆಯಿಂದ ಕೆರೆಗೆ ನೀರು ಪೂರೈಸುವ ಕಾಲುವೆ ನಿರ್ಮಾಣಕ್ಕಾಗಿ ಸರ್ಕಾರ ಜಮೀನು ಪಡೆದುಕೊಂಡಿತು,ಆದರೆ ಜಮೀನು ನೀಡಿದ ಕಲಘಟಗಿ ತಾಲೂಕಿನ 9 ರೈತರಿಗೆ 35 ಲಕ್ಷ ರೂ. ಬಾಕಿ ಇಟ್ಟುಕೊಂಡಿದ್ದ ಹಿನ್ನೆಲೆ ರೈತರು ನ್ಯಾಯಾಲಯದ ಮೆಟ್ಟಿಲೇರಿದ್ದರು,ಇಂದು ಎರಡನೇ ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಲಯದ ಆದೇಶದ ಮೇರೆಗೆ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿದ್ದ,ಕಂಪ್ಯೂಟರ್, ಪ್ರಿಂಟರ್ ಮತ್ತು ಝೆರಾಕ್ಸ್ ಮಷಿನ್ ನ್ನು ರೈತರೇ ಜಪ್ತಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next