Advertisement

ಸೋಂಕಿನಿಂದ ಅಸುನೀಗಿದವರ ಕುಟುಂಬಕ್ಕೆ 4 ಲಕ್ಷ ಪರಿಹಾರ: ತೀರ್ಪು ಕಾಯ್ದಿರಿಸಿದ ಸುಪ್ರೀಂ

09:47 PM Jun 21, 2021 | Team Udayavani |

ನವದೆಹಲಿ: ಕೊರೊನಾ ಸೋಂಕಿನಲ್ಲಿ ಅಸುನೀಗಿದ ವ್ಯಕ್ತಿಗಳ ಕುಟುಂಬಕ್ಕೆ 4 ಲಕ್ಷ ರೂ. ಪರಿಹಾರ ನೀಡಬೇಕು ಎಂಬ ಬಗೆಗಿನ ವಿಚಾರಣೆಯನ್ನು ಸುಪ್ರೀಂಕೋರ್ಟ್‌ ಸೋಮವಾರ ಮುಕ್ತಾಯಗೊಳಿಸಿದೆ. ಜತೆಗೆ ತೀರ್ಪನ್ನು ಕಾಯ್ದಿರಿಸಿದೆ. ನ್ಯಾ.ಅಶೋಕ್‌ ಭೂಷಣ್‌ ಮತ್ತು ನ್ಯಾ.ಎಂ.ಆರ್‌.ಶಾ ಅವರನ್ನೊಳಗೊಂಡ ರಜಾ ಕಾಲದ ವಿಶೇಷ ನ್ಯಾಯಪೀಠ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಮತ್ತು ಹಿರಿಯ ನ್ಯಾಯವಾದಿ ಎಸ್‌.ಬಿ.ಉಪಾಧ್ಯಾಯ ಮಂಡಿಸಿದ ವಾದಗಳನ್ನು ಆಲಿಸಿತು. ಅರ್ಜಿದಾರರ ಪರ ವಕೀಲರು ಮತ್ತು ಕೇಂದ್ರ ಸರ್ಕಾರದ ಪರ ನ್ಯಾಯವಾದಿಗಳು ಮೂರು ದಿನಗಳಲ್ಲಿ ಲಿಖೀತ ಅಭಿಪ್ರಾಯ ಸಲ್ಲಿಸಿಬೇಕೆಂದು ಸೂಚಿಸಿತು. ಜತೆಗೆ ಕೇಂದ್ರ ಸರ್ಕಾರ ಸೋಂಕಿನಿಂದ ಅಸುನೀಗಿದವರಿಗೆ ನೀಡಲಾಗುವ ಮರಣ ಪ್ರಮಾಣ ಪತ್ರ ನೀಡುವ ಪ್ರಕ್ರಿಯೆ ಸರಳಗೊಳಿಸುವಂತೆ ಸೂಚಿಸಿತು.

Advertisement

ವಿಚಾರಣೆಯ ಸಂದರ್ಭದಲ್ಲಿ ಪ್ರಧಾನಿ ಅಧ್ಯಕ್ಷತೆಯಲ್ಲಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸೋಂಕಿನಿಂದ ಮೃತರಾದವರ ಕುಟುಂಬಕ್ಕೆ 4 ಲಕ್ಷ ರೂ. ಪರಿಹಾರ ನೀಡದೇ ಇರಲು ನಿರ್ಧರಿಸಿದೆಯೇ ಎಂದು ನ್ಯಾಯಪೀಠ ಪ್ರಶ್ನಿಸಿತು.

ಇದನ್ನೂ ಓದಿ :ಗರ್ಭಿಣಿಯರಿಗೂ ಲಸಿಕೆ? ಕೇಂದ್ರ ಆರೋಗ್ಯ ಇಲಾಖೆಯಿಂದ ಸುಳಿವು

Advertisement

Udayavani is now on Telegram. Click here to join our channel and stay updated with the latest news.

Next