Advertisement

ಬದ್ಧತೆ, ಪರಿಶ್ರಮದಿಂದ ಉನ್ನತಿ: ಡಾ|ಹೆಗ್ಗಡೆ

03:25 PM Mar 13, 2017 | Team Udayavani |

ಮಂಗಳೂರು: ಬದ್ಧತೆ ಹಾಗೂ ಪರಿಶ್ರಮದಿಂದ ಜೀವನದಲ್ಲಿ ಉನ್ನತಿ ಸಾಧ್ಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಶನಲ್‌ ಸೊಸೈಟಿ ಅಧ್ಯಕ್ಷ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. 

Advertisement

ಎಸ್‌ಡಿಎಂ ಕಾನೂನು ಕಾಲೇಜು, ಸ್ನಾತಧಿಕೋತ್ತರ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ಆಶ್ರಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಕಾನೂನು ಉತ್ಸವ ಲೆಕ್ಸ್‌ ಅಲ್ಟಿಮಾ-17ರ ಸಮಾರೋಪ ಹಾಗೂ ಹಳೇ ವಿದ್ಯಾರ್ಥಿಗಳಿಗೆ ಸಮ್ಮಾನ ಕಾರ್ಯಕ್ರಮದಲ್ಲಿ ಅವರು ಸಂದೇಶ ನೀಡಿದರು.

ಕಾಲೇಜಿನ ಹಳೇ ವಿದ್ಯಾರ್ಥಿ ಹಾಗೂ ಸುಪ್ರೀಂ ಕೋರ್ಟ್‌ ನ್ಯಾಯಾಧೀಶ ನ್ಯಾ| ಮೂ| ಎಸ್‌. ಅಬ್ದುಲ್‌ ನಜೀರ್‌, ರಾಜ್ಯ ಹೈಕೋರ್ಟ್‌ ನ್ಯಾಯಾಧೀಶ ನ್ಯಾ| ಮೂ| ಜಾನ್‌ ಮೈಕೆಲ್‌ ಡಿ’ಕುನ್ಹಾ ಕಾನೂನು ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ. ಬದ್ಧತೆ, ಪರಿಶ್ರಮದ ಮೂಲಕ ಸಾಧನಾ ಪಥದಲ್ಲಿ ಸಾಗಿ ಉನ್ನತ ಸ್ಥಾನಕ್ಕೇರಿದ್ದಾರೆ ಎಂದು ಅವರು ಹೇಳಿದರು. 

ನ್ಯಾ| ಮೂ| ಎಸ್‌. ಅಬ್ದುಲ್‌ ನಜೀರ್‌, ಹಾಗೂ ನ್ಯಾ |ಮೂ| ಜಾನ್‌ ಮೈಕೆಲ್‌ ಡಿ’ಕುನ್ಹಾ  ಅವರನ್ನು ಡಾ| ವೀರೇಂದ್ರ ಹೆಗ್ಗಡೆ ಸಮ್ಮಾನಿಸಿ ಗೌರವಿಸಿದರು. 

ನ್ಯಾ| ಮೂ| ಎಸ್‌. ಅಬ್ದುಲ್‌ ನಜೀರ್‌ ಮಾತನಾಡಿ, ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಇಂದು ನ್ಯಾಯಾಧೀಶರಾಗಿ, ನ್ಯಾಯವಾದಿಗಳಾಗಿ ಉನ್ನತ ಸ್ಥಾನಕ್ಕೇರಿದ್ದಾರೆ ಎಂದರು. 

Advertisement

ಕಾನೂನು ಶಿಕ್ಷಣ ಮುಗಿಸಿದಾಗ ಮುಂದೇನು ಎಂಬ ಪ್ರಶ್ನೆ ಮೂಡುತ್ತದೆ. ಆದರೆ ಈ ಕ್ಷೇತ್ರದಲ್ಲಿ ಇರುವ ವಿಪುಲ ಅವಕಾಶ ಬಳಸಿಕೊಳ್ಳುವಲ್ಲಿ ಸಮರ್ಥರಾದಾಗ ಯಶಸ್ಸು ಪಡೆಯಲು ಸಾಧ್ಯ ಎಂದು ಅವರು ಹೇಳಿದರು. ಕಾಲೇಜಿನ ಶಿಕ್ಷಣದ 3 ವರ್ಷಗಳನ್ನು ಅವರು ಸ್ಮರಿಸಿದರು.

ನ್ಯಾ| ಮೂ| ಜಾನ್‌ ಮೈಕೆಲ್‌ ಡಿ’ಕುನ್ಹಾ ಮಾತನಾಡಿ, ಕಾನೂನು ಕ್ಷೇತ್ರದಲ್ಲಿ ಈ ಹಿಂದಿಗಿಂತ ಪ್ರಸ್ತುತ ಹೆಚ್ಚಿನ ಅವಕಾಶಗಳಿವೆ. ಇದಕ್ಕೆ ಪೂರಕವಾಗಿ ವಿದ್ಯಾರ್ಥಿಗಳು ತೆರೆದುಕೊಳ್ಳಧಿಬೇಕು. ಅಂತರ್ಜಾಲಗಳಿಂದ ಮಾಹಿತಿ ಸಂಗ್ರಹಿಸಿ ಅವುಗಳ ಮರುಪ್ರಸ್ತುತಿಯೇ ಜ್ಞಾನವಾಗುವುದಿಲ್ಲ. ಇದರಿಂದ ನಮ್ಮಲ್ಲಿ ಚಿಂತನಾಶೀಲತೆ ನಶಿಸುತ್ತದೆ. ವಿಶ್ಲೇಷಣೆ, ಸ್ವಚಿಂತನೆ ಶಕ್ತಿ ಬೆಳೆಸಿಕೊಳ್ಳಬೇಕು ಎಂದರು. 

ರಾಜ್ಯ ಹೈಕೋರ್ಟ್‌ನ ನ್ಯಾಯಾಧೀಶ ನ್ಯಾ| ಮೂ| ಎ.ಎಸ್‌. ಬೋಪಣ್ಣ ಮಾತನಾಡಿ, ಕಾನೂನು ವಿದ್ಯಾರ್ಥಿಗಳು ಅವಕಾಶ ಬಳಸಿಉನ್ನತ ಸಾಧನೆ ಮಾಡಬೇಕು ಎಂದರು. 

ನ್ಯಾ| ಮೂ| ಎ.ಎನ್‌. ವೇಣುಗೋಪಾಲ ಗೌಡ ಮಾತನಾಡಿ, ಎಸ್‌ಡಿಎಂ ಕಾನೂನು ಕಾಲೇಜು ಕಾನೂನು ಶಿಕ್ಷಣ ಕ್ಷೇತ್ರದಲ್ಲಿ ಉನ್ನತ ಸಾಧನೆ ದಾಖಲಿಸುತ್ತಾ ಬಂದಿದ್ದು, ನ್ಯಾ| ಮೂ| ಎಸ್‌. ಅಬ್ದುಲ್‌ ನಜೀರ್‌ ಹಾಗೂ ನ್ಯಾ| ಮೂ| ಜಾನ್‌ ಮೈಕೆಲ್‌ ಡಿ’ಕುನ್ಹಾ ಯುವ ನ್ಯಾಯವಾದಿಗಳಿಗೆ ಪ್ರೇರಣೆಯಾಗಿದ್ದಾರೆ ಎಂದರು.

ಭಾರತ ಸರಕಾರದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ.ಎಂ. ನಟರಾಜ್‌ ಅತಿಥಿಯಾಗಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ| ತಾರಾನಾಥ್‌ ಸ್ವಾಗತಿಸಿದರು. ಪ್ರೊ| ಮಹೇಶ್ಚಂದ್ರ ನಾಯಕ್‌ ವಂದಿಸಿದರು. ರೂಪೇಶ್‌ ನಿರೂಪಿಸಿದರು. ಉತ್ಸವದ ಸಂಯೋಜಕ ಸಂತೋಷ್‌ ಪ್ರಭು, ಕಾರ್ಯದರ್ಶಿ ಗೌತಮಿ ಎಸ್‌. ಭಂಡಾರಿ, ಸಹ ಸಂಯೋಜಕರಾದ ವಿಕ್ರಂ ರಾಜ್‌, ವರ್ಷಾ ಶೆಟ್ಟಿ ಅತುಲ್ಯಾ, ಸ್ಟೇಫನಿಯಾ ಉಪಸ್ಥಿತರಿದ್ದರು. 

ಸಾಧಕ ಹಳೆ ವಿದ್ಯಾರ್ಥಿಗಳ ಸಮಾಗಮ
ಕಾನೂನು ಕ್ಷೇತ್ರದಲ್ಲಿ ಉನ್ನತ ಹುದ್ದೆಗೇರಿದ ಎಸ್‌ಡಿಎಂ ಕಾನೂನು ಕಾಲೇಜಿನ ಹಳೇ ವಿದ್ಯಾರ್ಥಿಗಳಾದ ಸುಪ್ರೀಂ ಕೋರ್ಟ್‌ ನ್ಯಾಯಾಧೀಶ ನ್ಯಾ| ಮೂ| ಎಸ್‌. ಅಬ್ದುಲ್‌ ನಜೀರ್‌, ರಾಜ್ಯ ಹೈಕೋರ್ಟ್‌ ನ್ಯಾಯಾಧೀಶ ಹಾಗೂ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅಕ್ರಮ ಆಸ್ತಿ ಪ್ರಕರಣದಲ್ಲಿ ಮೂಲ ತೀರ್ಪು ನೀಡಿದ್ದ ನ್ಯಾ| ಮೂ| ಜಾನ್‌ ಮೈಕೆಲ್‌ ಡಿ’ಕುನ್ಹಾ, ಭಾರತ ಸರಕಾರದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ.ಎಂ. ನಟರಾಜ್‌ ಹಾಗೂ ಕರ್ನಾಟಕ ಹೈಕೋರ್ಟ್‌ ರಿಜಿಸ್ಟ್ರಾರ್‌ ಜಯಂತ್‌ ಅವರ ಸಮಾಗಮಕ್ಕೆ ಸಮಾರಂಭ ಸಾಕ್ಷಿಯಾಯಿತು. 
ಸಮಾರಂಭದಲ್ಲಿ ಉಪಸ್ಥಿತರಿದ್ದ ರಾಜ್ಯ ಹೈಕೋರ್ಟ್‌ ನ್ಯಾಯಾಧೀಶ ನ್ಯಾ|ಮೂ| ಎ.ಎಸ್‌. ಬೋಪಣ್ಣ ಪುತ್ತೂರಿನಲ್ಲಿ ಕಾಲೇಜು ವಿದ್ಯಾಭ್ಯಾಸ ಮಾಡಿದ್ದು, ತುಳುಭಾಷೆ ಚೆನ್ನಾಗಿ ಮಾತನಾಡುತ್ತಾರೆ. ಇನ್ನೋರ್ವ ನ್ಯಾಯಾಧೀಶ ನ್ಯಾ| ಮೂ| ಎ.ಎನ್‌. ವೇಣುಗೋಪಾಲ ಗೌಡ ಅವರು ದ.ಕ. ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶರಾಗಿದ್ದಾರೆ. ಆದುದರಿಂದ ಅವರನ್ನೂ ಒಂದರ್ಥದಲ್ಲಿ  ದ.ಕ. ಜಿಲ್ಲೆಯ ಮಣ್ಣಿನ ಮಕ್ಕಳು ಎಂದು ಕರೆಯಬಹುದು ಎಂದು ನ್ಯಾ| ಮೂ| ಎಸ್‌. ಅಬ್ದುಲ್‌ ನಜೀರ್‌ ಬಣ್ಣಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next