Advertisement

ಮಾನಸಿಕ ವ್ಯಕ್ತಿ ರಕ್ಷಿಸಿದ ಕಮಿಷನರೇಟ್‌ ಸಿಬ್ಬಂದಿ

08:09 PM Jul 23, 2021 | Team Udayavani |

ಹುಬ್ಬಳ್ಳಿ: ಮಾನಸಿಕ ವ್ಯಕ್ತಿಯನ್ನು ಹು-ಧಾ ಪೋಲಿಸ್‌ ಕಮಿಷನರೇಟ್‌ ಸಿಬ್ಬಂದಿ ರಕ್ಷಣೆ ಮಾಡುವ ಮೂಲಕ ಮಾನವೀಯತೆ ಮರೆದಿದ್ದಾರೆ.

Advertisement

ಅಪರಿಚಿತ ಮಾನಸಿಕ ಅಸ್ವಸ್ಥನೊಬ್ಬ ಕಾಲಿಗೆ ಗಾಯ ಮಾಡಿಕೊಂಡು ರಸ್ತೆ ಮಧ್ಯದಲ್ಲಿಯೇ ನೋವಿನಿಂದ ನರಳಾಡುತ್ತಿದ್ದ, ಇದನ್ನು ನೋಡಿದ ರೆವಲ್ಯೂಷನ್‌ ಮೈಂಡ್‌ನ‌ ವಿನಾಯಕ ಜೋಶಿ ಶೆಟ್ಟರ ಎಂಬುವರು ಈ ಕುರಿತು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದರು. ಈ ಪೋಸ್ಟ್‌ಗೆ ಕೂಡಲೇ ಸ್ಪಂದಿಸಿದ ಕೇಶ್ವಾಪುರ ಪೊಲೀಸ್‌ ಠಾಣೆಯ ಪಿಎಸ್‌ಐ ಬಾಬಾ ಅವರು ನಿರಂತರ ಸುರಿಯುತ್ತಿರುವ ಮಳೆಯಲ್ಲಿಯೇ ಸ್ಥಳಕ್ಕೆ ಭೇಟಿ ಕೊಟ್ಟು ಗಾಯಗೊಂಡ ವ್ಯಕ್ತಿಗೆ ವೈದ್ಯಕೀಯ ಉಪಚಾರ ಮಾಡಿದ್ದಾರೆ.

ಹೆಚ್ಚಿನ ಚಿಕಿತ್ಸೆಗಾಗಿ ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪೋಲಿಸರ ಈ ಕಾರ್ಯಕ್ಕೆ ಸಾರ್ವಜನಿಕ ಮೆಚ್ಚುಗೆ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next