Advertisement

ಸಕಾಲಕ್ಕೆ ಸ್ಪಂದಿಸಿದ ಎಂಟು ಅಧಿಕಾರಿಗಳಿಗೆ ಪ್ರಶಂಸಾ ಪತ್ರ

12:11 PM Sep 20, 2019 | Team Udayavani |

ಧಾರವಾಡ: ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ಸಕಾಲ ಕಾಯ್ದೆಯಡಿ ತ್ವರಿತವಾಗಿ ವಿಲೇವಾರಿ ಮಾಡಿದ ವಿವಿಧ ಇಲಾಖೆಯ ಎಂಟು ಅಧಿಕಾರಿಗಳಿಗೆ ಡಿಸಿ ದೀಪಾ ಚೋಳನ್‌ ಪ್ರಶಂಸಾ ಪತ್ರಗಳನ್ನು ಗುರುವಾರ ಪ್ರದಾನ ಮಾಡಿದರು.

Advertisement

ಜಿಲ್ಲಾ ವಿಕಲಚೇತನರ ಕಲ್ಯಾಣಾ ಧಿಕಾರಿ ಕೆ.ಎಂ. ಅಮರನಾಥ, ಉಪ ತಹಶೀಲ್ದಾರ್‌ ಪಿ.ಎ. ಪಾಟೀಲ, ಮಹಾನಗರ ಪಾಲಿಕೆ ವಲಯ ಸಹಾಯಕ ಆಯುಕ್ತರಾದ ಜಿ.ಎನ್‌. ಗುತ್ತಿ, ವಿ.ಎಂ. ಸಾಲಿಮಠ, ಉಪನೋಂದಣಾ  ಧಿಕಾರಿ ಟಿ.ಎನ್‌. ಬಾವೂರ, ವಾಕರಸಾಸಂ ಡಿಪೋ ಮ್ಯಾನೇಜರ್‌ ಜೆ.ಎಸ್‌. ದಿವಾಕರ, ಆಹಾರ ನಿರೀಕ್ಷಕರಾದ ರಾಮಚಂದ್ರ ಸಿ.ಪಿ. ಹಾಗೂ ಶಿವಶಂಕರ ಹಿರೇಮಠ

ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಮಹಾನಗರ ಪಾಲಿಕೆ ಆಯುಕ್ತ ಡಾ| ಸುರೇಶ ಇಟ್ನಾಳ, ಅಪರ ಜಿಲ್ಲಾ ಧಿಕಾರಿ ಇಬ್ರಾಹಿಂ ಮೈಗೂರ, ಉಪವಿಭಾಗಾಧಿಕಾರಿ ಮಹ್ಮದ ಜುಬೇರ, ಸಕಾಲ ಯೋಜನೆಯ ಸಮಾಲೋಚಕ ವೀರೇಂದ್ರ ರೆಡ್ಡಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next