Advertisement

‘ಉಸಿರೇ ಉಸಿರೇ’ ಚಿತ್ರಕ್ಕೆ ಬ್ರಹ್ಮಾನಂದಂ ಕಾಮಿಡಿ

03:50 PM Apr 17, 2022 | Team Udayavani |

ರಾಜೀವ್‌ ನಾಯಕ ನಟರಾಗಿ ನಟಿಸುತ್ತಿರುವ “ಉಸಿರೇ ಉಸಿರೇ’ ಚಿತ್ರದ ಚಿತ್ರೀಕರಣ ಭರ್ಜರಿಯಾಗಿ ಸಾಗುತ್ತಿದೆ. ಈಗ ಈ ಚಿತ್ರಕ್ಕೆ ತೆಲುಗಿನ ಖ್ಯಾತ ಹಾಸ್ಯನಟ ಬ್ರಹ್ಮಾನಂದಂ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಚಿತ್ರಕ್ಕೆ ಮತ್ತಷ್ಟು ಕಾಮಿಡಿ ಕಿಕ್‌ ಸಿಗಲಿದೆ. ಇತ್ತೀಚೆಗೆ ಚಿತ್ರತಂಡ ನಾಟಕ ಪ್ರಸಂಗವೊಂದನ್ನು ಚಿತ್ರೀಕರಿಸಿದ್ದು, ಈ ದೃಶ್ಯದಲ್ಲಿ ಬ್ರಹ್ಮಾನಂದಂ ಭಾಗಿಯಾಗಿದ್ದರು. ಈ ಚಿತ್ರವನ್ನು ವಿಜಯ್‌ ನಿರ್ದೇಶಿಸುತ್ತಿದ್ದಾರೆ.

Advertisement

ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಸಿ.ಎಂ ವಿಜಯ್‌, “ಇದೊಂದು ಔಟ್‌ ಆ್ಯಂಡ್‌ ಔಟ್‌ ನೈಜ ಘಟನೆಯಾಧಾರಿತ ಸ್ಟೋರಿ ಸಿನಿಮಾ. ಕೆಲ ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಘಟನೆಯನ್ನ ಇಟ್ಟುಕೊಂಡು ಸಿನಿಮಾದ ಕಥೆ ಮಾಡಿದ್ದೇವೆ. ಇಲ್ಲಿಯವರೆಗೂ ಯಾವ ಸಿನಿಮಾದಲ್ಲೂ ಕಾಣದ ಕ್ಲೈಮ್ಯಾಕ್ಸ್‌ ಈ ಸಿನಿಮಾದಲ್ಲಿದೆ. ಇಲ್ಲಿಯವರೆಗೆ ಬಂದ ಎಲ್ಲ ಲವ್‌ ಸ್ಟೋರಿಗಳಿಗಿಂತ ಡಿಫ‌ರೆಂಟ್‌ ಆಗಿ ಸಿನಿಮಾ ನಿಲ್ಲುತ್ತದೆ’ ಎಂದು ಮಾಹಿತಿ ನೀಡಿದರು.

“ಎನ್‌ ಗೊಂಬೆ ಪ್ರೊಡಕ್ಷನ್ಸ್‌’ ಬ್ಯಾನರ್‌ನಲ್ಲಿ ಪ್ರದೀಪ್‌ ಯಾದವ್‌ ಈ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ. “ಇಲ್ಲಿಯವರೆಗೆ ಅನೇಕ ಕಥೆಗಳನ್ನು ಕೇಳಿದ್ದೆ. ಆದ್ರೆ ರಾಜೀವ್‌ ಹಾಗೂ ವಿಜಯ್‌ ಬಂದು ಹೇಳಿದ ಈ ಕಥೆ ಇಷ್ಟವಾಗಿದ್ದರಿಂದ, ಅದನ್ನ ಸಿನಿಮಾ ಮಾಡಲು ಮುಂದಾದೆ’ ಎಂದರು ನಿರ್ಮಾಪಕ  ಪ್ರದೀಪ್‌ ಯಾದವ್‌.

ಇನ್ನು “ಉಸಿರೇ.. ಉಸಿರೇ…’ ಚಿತ್ರದಲ್ಲಿ ರಾಜೀವ್‌ಗೆ ನಾಯಕಿಯಾಗಿ ಶ್ರೀಜಿತ ಘೋಷ್‌ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಕನ್ನಡ ಮತ್ತು ತೆಲುಗಿನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ಬಹುಭಾಷಾ ನಟ ಅಲಿ ಮತ್ತೂಂದು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ವಿವೇಕ್‌ ಚಕ್ರವರ್ತಿ ಸಂಗೀತ, ಸರವಣನ್‌ ಛಾಯಾಗ್ರಹಣವಿದೆ.

Advertisement

Udayavani is now on Telegram. Click here to join our channel and stay updated with the latest news.

Next