Advertisement

“ಯತ್ನಾಳ ಬಹಿರಂಗ ಚರ್ಚೆಗೆ ಬರಲಿ’

11:05 PM Jan 15, 2020 | Lakshmi GovindaRaj |

ಬಾಗಲಕೋಟೆ: ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳರು, ಮುರಗೇಶ ನಿರಾಣಿ ಅವರ ಬಗ್ಗೆ ಮಾತನಾಡುವ ಮೊದಲು ತಮ್ಮ ಹಿಂದಿನ ರಾಜಕೀಯ ಇತಿಹಾಸ ನೆನಪಿಸಿಕೊಳ್ಳಲಿ. ಯತ್ನಾಳರು ಸಚ್ಚಾರಿತ್ರ ರಾಜಕಾರಣಿಯೇ ಎಂಬುದರ ಕುರಿತು ತಮ್ಮೊಂದಿಗೆ ಬಹಿರಂಗ ಚರ್ಚೆಗೆ ಬರಲಿ ಎಂದು ಬಿಜೆಪಿ ಶಾಸಕ ಮುರಗೇಶ ನಿರಾಣಿ ಅವರ ಸಹೋದರ ಸಂಗಮೇಶ ನಿರಾಣಿ ಸವಾಲು ಹಾಕಿದ್ದಾರೆ.

Advertisement

ಬುಧವಾರ ಸುದ್ದಿಗಾರರ ಜತೆ ಮಾತನಾಡಿ, ಯತ್ನಾಳರು ಕಳೆದ 2008ರಿಂದ ರಾಜಕೀಯದಲ್ಲಿ ಮೂಲೆಗುಂಪಾಗಿದ್ದರು. ಅವರಿಗೆ ರಾಜಕೀಯ ಪುನರ್‌ಜನ್ಮ ನೀಡಿದ್ದೇ ನಾನು. ವಿಧಾನಪರಿಷತ್‌ ಚುನಾವಣೆಗೆ ಪಕ್ಷೇತರರಾಗಿ ಸ್ಪರ್ಧಿಸಿದ್ದಾಗ ನನಗಷ್ಟೇ ಅಲ್ಲ, ನಮ್ಮ ಮನೆಯ ನಾಯಿ-ಬೆಕ್ಕಿಗೂ ಸಾಷ್ಟಾಂಗ ನಮಸ್ಕಾರ ಹಾಕಿದ್ದರು. ಅದನ್ನು ಇಷ್ಟು ಬೇಗ ಮರೆಯುವಂತಹ ದುಷ್ಟ ರಾಜಕಾರಣ ಯತ್ನಾಳರು ಮಾಡಬಾರದಿತ್ತು ಎಂದು ಟೀಕಿಸಿದರು.

ಚರ್ಚೆಗೆ ಬರಲಿ: ಯತ್ನಾಳರು, ವಿಜಯಪುರದ ಜಿಲ್ಲಾ ಕ್ರೀಡಾಂಗಣದಲ್ಲಿ ಬಹಿರಂಗ ಚರ್ಚೆ ಏರ್ಪಡಿಸಲಿ. ನಾನು ಸ್ವತಃ ಹೋಗುತ್ತೇನೆ. ಅವರು ಮುರಗೇಶ ನಿರಾಣಿ ಕುರಿತು ಮಾಡಿರುವ ಆರೋಪ ಸಾಬೀತು ಮಾಡಲಿ. ತಾವು ರಾಜಕೀಯ ಶುದ್ಧ ವ್ಯಕ್ತಿ ಎಂಬುದನ್ನು ತೋರಿಸಲಿ. ಅವರು ರಾಜಕೀಯದಲ್ಲಿ ಏನೇನು ಮಾಡಿದ್ದಾರೆ ಎಂದು ನಾನೂ ಹೇಳುತ್ತೇನೆ ಎಂದರು.

ನೈತಿಕತೆ ಎಲ್ಲಿತ್ತು: ಜೆಡಿಎಸ್‌ಗೆ ಹೋದಾಗ ಮುಸ್ಲಿಮರನ್ನು ಹೊಗಳಿದರು. ಆರ್‌ಎಸ್‌ಎಸ್‌ ಅನ್ನು ಬೈದರು. ಈಗ ಮುಸ್ಲಿಮರನ್ನು ಬೈಯುತ್ತಿದ್ದಾರೆ. ಇಂತಹ ನೈತಿಕತೆ ಇಲ್ಲದ ದುಷ್ಟ ಹಾಗೂ ರಾಕ್ಷಸ ಪ್ರವೃತ್ತಿಯ ರಾಜಕಾರಣಿಯಿಂದ ಚಾರಿತ್ರ್ಯ ಕಲಿಯಬೇಕಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next