Advertisement

ಅಡ್ಡದಾರಿಯಲ್ಲಿ ಬಂದು ಮದ್ಯ ಖರೀದಿ

01:18 PM May 12, 2020 | Lakshmi GovindaRaj |

ಮುಳಬಾಗಿಲು: ತಾಲೂಕು ಗಡಿಗೆ ಹೊಂದಿಕೊಂಡ ಆಂಧ್ರದಲ್ಲಿ ಕೊರೊನಾ ಸೋಂಕಿತರು ಇದ್ದರೂ ಚೆಕ್‌ ಪೋಸ್ಟ್‌ ತಪ್ಪಿಸಿ ಅಡ್ಡದಾರಿಗಳಲ್ಲಿ ಬಂದು ಬಾರ್‌ಗಳಲ್ಲಿ ಮದ್ಯ ಖರೀದಿಸುತ್ತಿದ್ದಾರೆ. ಇದು ಸ್ಥಳೀಯರಲ್ಲಿ  ಹೆಚ್ಚಿನ ಆತಂಕ ಮೂಡಿಸಿದೆ. ಆಂಧ್ರದ ಚಿತ್ತೂರು ಜಿಲ್ಲೆಯ ವಿ.ಕೋಟೆ ವ್ಯಾಪ್ತಿ ಯಲ್ಲಿ 9 ಮತ್ತು ರಾಮಸಮುದ್ರಂ ವ್ಯಾಪ್ತಿಯಲ್ಲಿ ಮೂವರು ಕೊರೊನಾ ಸೋಂಕಿತರು ಇದ್ದಾರೆ.

Advertisement

ಗ್ರೀನ್‌ ಜೋನ್‌ನಲ್ಲಿರುವ ಜಿಲ್ಲೆಯಲ್ಲಿ  ಮತ್ತಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ತಾಲೂಕಿನ ಆಂಧ್ರ ಗಡಿಯಲ್ಲಿರುವ 100ಕ್ಕೂ ಹೆಚ್ಚು ಹಳ್ಳಿಗಳಲ್ಲಿ ತಾಲೂಕು ಆಡಳಿತ ಲಾಕ್‌ಡೌನ್‌ ಮಾಡಿ ಕರ್ನಾಟಕದಿಂದ ಆಂಧ್ರಕ್ಕೆ ಸಂಪರ್ಕ  ಕಲ್ಪಿಸುವ ಪ್ರಮುಖ ರಸ್ತೆ ಸೇರಿದಂತೆ ಹಳ್ಳಿ ರಸ್ತೆಗಳಲ್ಲಿಯೂ ಚೆಕ್‌ ಪೋಸ್ಟ್‌ ಹಾಕಿ ಜನರ ಸಂಚಾರ ನಿರ್ಬಂಧಿಸಿದ್ದಾರೆ.

ಇಷ್ಟಾದರೂ ಆಂಧ್ರದ ಜನರು ತಾಲೂಕಿನ ಬಾರ್‌ಗಳಿಗೆ ಲಗ್ಗೆ ಇಡಲು ಶುರು ಮಾಡಿದ್ದಾರೆ. ಅಂತೆಯೇ ಭಾನು  ವಾರ ಆಂಧ್ರದ ಪಲಮನೇರು ಜನರ ಕಡಿವಾಣಕ್ಕಾಗಿ ರಾಷ್ಟ್ರೀಯ ಹೆದ್ದಾರಿ 75ರ ಅಂಚಿನ ಬಾರ್‌ಅನ್ನು ಅಬ ಕಾರಿ ಅಧಿಕಾರಿಗಳು ಮುಚ್ಚಿ ಸಿದ್ದಾರೆ. ಉಳಿದಂತೆ ತಾಯಲೂರು ಮತ್ತು ದೂಲಪಲ್ಲಿ ಗ್ರಾಪಂ ವ್ಯಾಪ್ತಿ ಯಲ್ಲಿನ ಹಳ್ಳಿಗಳಲ್ಲಿ ಸಾಕಷ್ಟು ಜನರೇ ಕಟ್ಟುನಿಟ್ಟಾಗಿ ಲಾಕ್‌ಡೌನ್‌ ಸೂಚನೆ ಪಾಲಿಸು ತ್ತಿದ್ದರೂ ಮಲ್ಲ ನಾಯ ಕನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ರುವ ಕೆಲವು ಹಳ್ಳಿಗಳಲ್ಲಿ ಮಾತ್ರ ಜನರು ನಿರ್ಲಕ್ಷಿಸು ತ್ತಿದ್ದಾರೆ.

ಗ್ರಾಮ  ದಲ್ಲಿನ ಬಾರ್‌ಗೆ ದ್ವಿಚಕ್ರ ವಾಹನದಲ್ಲಿ ಮಾಸ್ಕ್ ಧರಿಸದೇ, ಸಾಮಾ ಜಿಕ ಅಂತರ ಕಾಯ್ದು ಕೊಳ್ಳದೇ ಮದ್ಯ ಖರೀ ದಿಸಿ, ಲುಂಗಿ ಮತ್ತು ಚೀಲದಲ್ಲಿ ತೆಗೆದು ಕೊಂಡು ಹೋಗು ತ್ತಿದ್ದು, ಜಿಲ್ಲಾಡಳಿತ ಕ್ರಮ ಕೈಗೊಳ್ಳ  ಬೇಕೆಂದು ಮಲ್ಲನಾಯಕನಹಳ್ಳಿ ಗ್ರಾಪಂ ಗಸ್ತುದಾರರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next