Advertisement

Short Film: ಹೊಸಬರ ಕಲರ್ ಕನಸಿಗೆ ಹಂಸಲೇಖ ಸಾಥ್

07:08 PM Dec 07, 2023 | Team Udayavani |

ಯುವ ಪ್ರತಿಭೆ ಯಶ್ಚಿತ್‌ ಗೌಡ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ “ಕಲರ್‌ ಹನುಮ’ ಕಿರುಚಿತ್ರ ಇತ್ತೀಚೆಗೆ ಬಿಡುಗಡೆಯಾಯಿತು. ಜಗದೀಶ ಎಂ. ದೇವನಹಳ್ಳಿ ಬಂಡವಾಳ ಹೂಡಿ ನಿರ್ಮಿಸಿರುವ “ಕಲರ್‌ ಹನುಮ’ ಕಿರುಚಿತ್ರದಲ್ಲಿ ನವೀನ್‌ ಎಸ್‌. ಆರ್‌, ದೀಪಶ್ರೀ ಗೌಡ, ಚೇತನ್‌ ತ್ರಿವೇಣ್‌, ಕುಶಾಲ್‌ ನಾರಾಯಣ ಗೌಡ, ಮಹರ್ಷಿ, ಲಲಿತಾ, ತೇಜಸ್ವಿನಿ ಗೌಡ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

Advertisement

ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ “ಕಲರ್‌ ಹನುಮ’ ಕಿರುಚಿತ್ರವನ್ನು ಬಿಡುಗಡೆಗೊಳಿಸಿ ಹೊಸಬರ ಪ್ರಯತ್ನವನ್ನು ಪ್ರಶಂಸಿಸಿದರು.

ಇದೇ ವೇಳೆ ಮಾತನಾಡಿದ ಹಂಸಲೇಖ, “ಇಂದು ಬಣ್ಣದ ಲೋಕದಲ್ಲಿದ್ದರೂ ಮನುಷ್ಯ ಚಿತ್ರಮಂದಿರ ಒಳ ಹೊಕ್ಕರೆ ಕತ್ತಲು, ಗಾಳಿ, ರಕ್ತ ಕಾಣಿಸಿಕೊಂಡು, ಆತನು ತನಗೆ ಗೊತ್ತಿಲ್ಲದಂತೆ ಕತ್ತಲೆ ಕಡೆ ಹೋಗುತ್ತಿದ್ದಾನೆ. “ತಾರೆ ಜಮೀನ್‌ ಪರ್‌’ ಸಿನಿಮಾದಲ್ಲಿ ಅಮೀರ್‌ ಖಾನ್‌ ಒಂದು ಸಮಸ್ಯೆ ಇಟ್ಟುಕೊಂಡು ದೊಡ್ಡ ಸಿನಿಮಾ ಮಾಡಿದ್ದರು. ಅದರಂತೆ ಬಹುತೇಕ ಹೊಸಬರೇ ಸೇರಿಕೊಂಡು ಅಂಥದ್ದೇ ಒಂದು ವಿಷಯವನ್ನು ಇಟ್ಟುಕೊಂಡು “ಕಲರ್‌ ಹನುಮ’ ಕಿರುಚಿತ್ರ ಮಾಡಿದ್ದಾರೆ. ಇದರ ಕಥೆಯ ಆಯ್ಕೆ ಬಹಳ ಚೆನ್ನಾಗಿದೆ. ಈಗಿನ ವಾತಾವರಣದಲ್ಲಿ ಹೊಸಬಗೆಯಲ್ಲಿ ವಿಷಯವನ್ನು ಹೇಳಲು ದಾರಿ ಹುಡುಕಿಕೊಂಡಿರುವುದಕ್ಕೆ ಎಲ್ಲರನ್ನೂ ಅಭಿನಂದಿಸಬೇಕಾಗಿದೆ’ ಎಂದರು.

“ಕಲರ್‌ ಹನುಮ’ ಕಿರುಚಿತ್ರಕ್ಕೆ ರವಿರಾಜ್‌ ಸಂಗೀತ ಸಂಯೋಜಿಸಿದ್ದು, ಬೆನಕರಾಜು ಛಾಯಾಗ್ರಹಣ ಮತ್ತು ಸುರೇಶ್‌ ಅರಸ್‌ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ಬೆಂಗಳೂರು ಸುತ್ತಮುತ್ತ “ಕಲರ್‌ ಹನುಮ’ ಕಿರುಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಸದ್ಯ ಸೋಶಿಯಲ್‌ ಮೀಡಿ ಯಾದಲ್ಲಿ “ಕಲರ್‌ ಹನುಮ’ ಕಿರುಚಿತ್ರಕ್ಕೆ ನೋಡು ಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next