Advertisement

ದಿಂಡವಾರ ಬಳಿ ಬೈಕ್ ಗಳ ಮುಖಾಮುಖಿ ಢಿಕ್ಕಿ: ಮೂವರ ಸಾವು

12:42 PM Oct 03, 2020 | keerthan |

ವಿಜಯಪುರ: ಜಿಲ್ಲೆಯ ಬಸವನಬಾಗೇವಾಡಿ ತಾಲೂಕ ದಿಂಡವಾರ ಬಳಿ ಎರಡು ಬೈಕ್ ಗಳು ಮುಖಾಮುಖಿ ಢಿಕ್ಕಿಯಾಗಿ ಕಲಬುರ್ಗಿ ಜಿಲ್ಲೆಯ ಮೂವರು ಮೃತಪಟ್ಟ ದುರ್ಘಟನೆ ಜರುಗಿದೆ.

Advertisement

ಕಲಬುರ್ಗಿ ಜಿಲ್ಲೆಯ ಅಫಜಲಪುರದ ಮೂವರು ಯುವಕರು ಬೈಕ್ ನಲ್ಲಿ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟಕ್ಕೆ ಹೊರಟಿದ್ದರು ಎನ್ನಲಾಗಿದೆ.

ಬಸವನಬಾಗೇವಾಡಿ ತಾಲೂಕ ಮಾರ್ಗವಾಗಿ ಹೊರಟಾಗ ದಿಂಡವಾರ ಬಳಿ ಮತ್ತೊಂದು ಬೈಕ್ ಈ ಯಾತ್ರಿಗಳ ಬೈಕ್ ಗೆ ಢಿಕ್ಕಿಯಾಗಿದೆ.

ಇದನ್ನೂ ಓದಿ:ಶೂನ್ಯ ಶಿಕ್ಷಣ ವರ್ಷದತ್ತ ಒಲವು: ಪುಟ್ಟ ಮಕ್ಕಳಿಗೆ ಶಾಲೆ ಆರಂಭ ಬೇಡ; ಕೋವಿಡ್ ವ್ಯಾಧಿ ತೊಲಗಲಿ

ಡಿಕ್ಕಿ ರಭಸಕ್ಕೆ ಬೈಕ್ ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾಗಿವೆ. ಘಟನೆಯಲ್ಲಿ ಇಬ್ಬರು ಸ್ಥಳದಲ್ಲಿ ಮೃತಪಟ್ಟಿದ್ದು, ಮತ್ತೋರ್ವ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

Advertisement

ಮೃತರಲ್ಲಿ ಓರ್ವನ ಗುರುತು ಪತ್ತೆಯಾಗಿದ್ದು, ಕುಮಾರ (22) ಎಂದು ತಿಳಿದು ಬಂದಿದೆ. ಮೃತ ಇನ್ನಿಬ್ಬರ ಹೆಸರು ಪತ್ತೆಯಾಗಿಲ್ಲ.

ಈ ಕುರಿತು ಬಸವನಬಾಗೇವಾಡಿ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿದ್ದು, ಪ್ರಕರಣದಲ್ಲಿ ಮೃತರ ವಿವರ ಸಂಗ್ರಹಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next