Advertisement

ಎಂಟು ತಿಂಗಳ ಬಳಿಕ ಕಾಲೇಜು ಆರಂಭ: ಮೊದಲ ದಿನ ವಿದ್ಯಾರ್ಥಿಗಳಿಂದ ಸಾಧಾರಣ ಸ್ಪಂದನೆ

09:55 AM Nov 17, 2020 | keerthan |

ಕೊಪ್ಪಳ: ರಾಜ್ಯ ಸರ್ಕಾರವು 8 ತಿಂಗಳ ಬಳಿಕ ಕಾಲೇಜು ಆರಂಭಕ್ಕೆ ಅಸ್ತು ಎಂದಿದ್ದು ಮೊದಲ ದಿನವಾದ ಇಂದು ಕೊಪ್ಪಳದಲ್ಲಿ ವಿದ್ಯಾರ್ಥಿಗಳ ಹಾಜರಾತಿಗೆ ಸಾಧಾರಣ ಸ್ಪಂದನೆ ಬಂದಿದೆ.

Advertisement

ಕೋವಿಡ್ -19 ಸೋಂಕು ಉಲ್ಬಣದ ಹಿನ್ನೆಲೆಯಲ್ಲಿ ಮಾ.23 ರಂದು ಕಾಲೇಜುಗಳು ಬಂದ್ ಆಗಿದ್ದವು. ಇದರಿಂದ ವಿದ್ಯಾರ್ಥಿಗಳು ಲಾಕ್ ಡೌನ್ ನಲ್ಲಿ ಕ್ಲಾಸ್ ಇಲ್ಲದೆ ಕಳೆಯಬೇಕಾಗಿತ್ತು. ಸರ್ಕಾರ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಆನ್ ಲೈನ್ ಕ್ಲಾಸ್ ಆರಂಭಿಸಿತ್ತು. ಪ್ರಸ್ತುತ ಸೋಂಕಿನ ಪ್ರಮಾಣ‌ ಇಳಿಕೆ ಕಂಡಿದ್ದು ಇಂದಿನಿಂದ ಕಾಲೇಜು ತರಗತಿ ಆರಂಭಕ್ಕೆ ಸರ್ಕಾರ ಅನುಮತಿ ನೀಡಿದೆ.

ತರಗತಿ ಹಾಜರಾತಿ ಕಡ್ಡಾಯವಿರದ ಕಾರಣ ಮೊದಲ ದಿನ ಕಾಲೇಜಿಗೆ ವಿದ್ಯಾರ್ಥಿಗಳ ಬರುವಿಕೆ ಕಡಿಮೆ ಸಂಖ್ಯೆಯಲ್ಲಿದೆ. ಅಲ್ಲದೇ ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷಾ ವರದಿ ಕಾಲೇಜಿಗೆ ತಂದು ಕೊಟ್ಟರೆ ಮಾತ್ರ ತರಗತಿಗೆ ಹಾಜರಾಗಲು ಇಲಾಖೆ ಷರತ್ತು ವಿಧಿಸಿದ್ದರಿಂದ ಕೆಲವರು ಕೋವಿಡ್-19 ಪರೀಕ್ಷೆಯನ್ನ ಮಾಡಿಸುತ್ತಿದ್ದಾರೆ. ಇನ್ನು ಕೆಲವರು ವರದಿ ಪಡೆದು ಮೊದಲ ದಿನವೇ ಖುಷಿಯಿಂದ ಆಗಮಿಸಿದ್ದು ಕಂಡು ಬಂತು.

ಇದನ್ನೂ ಓದಿ:ಇಂದಿನಿಂದ ಕಾಲೇಜು ಆರಂಭ: ಕೋವಿಡ್ ಟೆಸ್ಟ್ ಕಡ್ಡಾಯ, ಇಂದಿನಿಂದಲೇ ಶೈಕ್ಷಣಿಕ ವರ್ಷಾರಂಭ

Advertisement

ಕೊಪ್ಪಳದ ಗವಿಸಿದ್ದೇಶ್ವರ ಕಾಲೇಜಿನಲ್ಲಿ ಪ್ರಾಚಾರ್ಯರು ಹಾಗೂ ಉಪನ್ಯಾಸಕರು ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳನ್ನು ಪ್ರೀತಿಯಿಂದ ಸ್ವಾಗತ ಮಾಡಿದ್ದು ಎಲ್ಲರ ಗಮನ ಸೆಳೆಯಿತು. ಕಾಲೇಜಿಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಮಾಸ್ಕ್ ಧರಿಸಲು ತಿಳಿಸಿ, ಸ್ಯಾನಿಟೈಜರ್ ನೀಡಿ ಥರ್ಮಲ್‌ ಸ್ಕ್ರೀನಿಂಗ್ ಪರೀಕ್ಷೆ ಮಾಡಲಾಯಿತು. ಕೋವಿಡ್ ರಿಪೋರ್ಟ್ ಕೊಟ್ಟ ವಿದ್ಯಾರ್ಥಿಗಳಿಗೆ ಮಾತ್ರ ಕಾಲೇಜಿನ ತರಗತಿಗಳಿಗೆ ಪ್ರವೇಶ ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next