Advertisement

ವಾರದ ಬಿಡುವಿನ ಬಳಿಕ ತಂಪೆರೆದ ಮಳೆ

01:20 AM Jun 24, 2019 | Lakshmi GovindaRaj |

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ವಾರಗಳ ಮಟ್ಟಿಗೆ ಬಿಡುವು ಕೊಟ್ಟಿದ್ದ ಮಳೆರಾಯ ಭಾನುವಾರ ಮಧ್ಯಾಹ್ನ ಮತ್ತೆ ಆಗಮಿಸಿದ್ದು, ಈ ಮೂಲಕ ನಗರದಲ್ಲಿ ಮುಂಗಾರು ಮಳೆ ಆರಂಭವಾಗಿದೆ.

Advertisement

ಭಾನುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ನಗರದಲ್ಲಿ ತುಂತುರುನೊಂದಿಗೆ ಆರಂಭವಾದ ಮಳೆ ಬಳಿಕ ಕೆಲಕಾಲ ಬಿರುಸಿನಿಂದ ಸುರಿಯಿತು. ಮಳೆಯಿಂದಾಗಿ ನಗರದಲ್ಲಿ ಮೂರು ಮರಗಳು ಧರೆಗುರುಳಿವೆ. ಪ್ರಮುಖ ಜಂಕ್ಷನ್‌, ಕೆಳಸೇತುವೆ, ಅಂಡರ್‌ಪಾಸ್‌ಗಳಲ್ಲಿ ನೀರು ನಿಂತು ಆ ರಸ್ತೆಗಳಲ್ಲಿ ಟ್ರಾಫಿಕ್‌ ಸಮಸ್ಯೆ ಉಂಟಾಗಿ ವಾಹನ ಸವಾರರು ಸಾಕಷ್ಟು ತೊಂದರೆ ಅನುಭವಿಸಿದರು.

ಶಾಂತಿ ನಗರ, ಸಂಪಂಗಿರಾಮನಗರ, ಎಂ.ಜಿ.ರಸ್ತೆ, ಕೆ.ಆರ್‌.ಮಾರುಕಟ್ಟೆ, ಕಾಟನ್‌ಪೇಟೆ, ಮಲ್ಲೇಶ್ವರ, ಮೈಸೂರು ರಸ್ತೆ, ಕೆ.ಆರ್‌.ಪುರಂ, ರಾಜಾಜಿನಗರ, ಯಲಹಂಕ, ಬ್ಯಾಟರಾಯನಪುರ ಸೇರಿ ಇನ್ನಿತರ ಭಾಗಗಳಲ್ಲಿ ಸಾಧಾರಣ ಮಳೆಯಾಗಿದೆ. ಒಟ್ಟಾರೆ ಬೆಂಗಳೂರು ನಗರದಲ್ಲಿ ಸರಾಸರಿ 6.4 ಮಿ.ಮೀ ಮಳೆಯಾಗಿದೆ. ಈ ಮೂಲಕ ನಗರಕ್ಕೆ ಮುಂಗಾರು ಪ್ರವೇಶವಾಯಿತು ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದರು.

ಮರಗಳು ಧರೆಗೆ: ಸಜ್ಜನ್‌ರಾವ್‌ ವೃತ್ತ ಬಳಿಯ ಕಾಳಿಂಗ್‌ರಾವ್‌ ರಸ್ತೆಯಲ್ಲಿ, ಕೆ.ಜಿ.ರಸ್ತೆಯ ಎಫ್ಕೆಸಿಸಿಐ ಮುಂಭಾಗ ಹಾಗೂ ಶಾಮತಿನಗರದ ಹೊನ್ನಾರಪೇಟೆಯಲ್ಲಿ ತಲಾ ಒಂದು ಮರ ಧರೆಗುರುಳಿವೆ. ಇನ್ನು ಬಿಬಿಎಂಪಿ ಅರಣ್ಯ ಘಟಕದ ಸಿಬ್ಬಂದಿ ಉರುಳಿರುವ ಮರಗಳ ತೆರವು ಕಾರ್ಯಕ್ಕೆ ಮುಂದಾಗಿದ್ದು, ಯಾವುದೇ ರೀತಿಯ ಅನಾಹುತಗಳು ಸಂಭವಿಸಿಲ್ಲ ಎಂದು ಪಾಲಿಕೆಯ ಕೇಂದ್ರ ಕಚೇರಿಯ ನಿಯಂತ್ರಣ ಕೊಠಡಿ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next