Advertisement

ಅಪಘಾತದಲ್ಲಿ ತುಳು ಚಿತ್ರ ನಿರ್ದೇಶಕ ಹ್ಯಾರಿಸ್ ಕೊಣಾಜೆಕಲ್ಲು ದುರ್ಮರಣ

08:36 AM Mar 22, 2019 | |

ಮೂಡಬಿದಿರೆ: ತುಳು ಚಿತ್ರರಂಗದ ಯುವ ಪ್ರತಿಭೆ, ‘ಆಟಿಡೊಂಜಿ ದಿನ’ ಚಿತ್ರ ನಿರ್ದೇಶಕ ಹ್ಯಾರಿಸ್ ಕೊಣಾಜೆಕಲ್ಲು ಗುರುವಾರ ತಡರಾತ್ರಿ ಮೂಡಬಿದಿರೆ ಸಮೀಪದ ಶಿರ್ತಾಡಿ ಹೌದಲ್ ನಲ್ಲಿ ನಡೆದ ಅಪಘಾತದಲ್ಲಿ ಮೃತರಾಗಿದ್ದಾರೆ. 

Advertisement

ಗುರುವಾರ ತಡರಾತ್ರಿ ಚಿತ್ರದ ಶೂಟಿಂಗ್ ಮುಗಿಸಿ ಹ್ಯಾರಿಸ್ ಅವರು ಓಮ್ನಿ ಕಾರು ಚಲಾಯಿಸಿಕೊಂಡು ಮನೆಗೆ ಹೊರಟಿದ್ದರು. ಈ ವೇಳೆ ಓಮ್ನಿ ಕಾರು ಮರಕ್ಕೆ ಗುದ್ದಿದೆ. ಓಮ್ನಿಯ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.

ಅಪಘಾತದ ರಭಸಕ್ಕೆ ಓಮ್ನಿಯ ಸ್ಟಿಯರಿಂಗ್ ಹ್ಯಾರಿಸ್ ಅವರ ಎದೆಗೆ ಗುದ್ದಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿರುವುದಾಗಿ ವರದಿಗಳು ತಿಳಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next