Advertisement

“ಕ‌ರಾವಳಿ ರಂಗಾಯಣ ತಲೆ ಎತ್ತಲಿ’

03:45 AM Feb 18, 2017 | Team Udayavani |

ಉಡುಪಿ: ರಂಗಕರ್ಮಿಗಳಿಗೆ ಅತಿ ಅಗತ್ಯವಿರುವ, ಸಕಲ ಸವಲತ್ತುಗಳು ಏಕತ್ರಲಭ್ಯವಾಗುವ ಕರಾವಳಿ ರಂಗಾಯಣ ಬಹುಬೇಗ ತಲೆ ಎತ್ತಲಿ ಎಂದು ಹಿರಿಯ ರಂಗ ನಟ ಮಂಡ್ಯ ರಮೇಶ್‌ ಹೇಳಿದರು.

Advertisement

ಫೆ. 17ರಂದು ಎಂಜಿಎಂ ಕಾಲೇಜಿನಲ್ಲಿ ಆರಂಭವಾದ ಮುರಾರಿ-ಕೆದ್ಲಾಯ ರಂಗೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ರಂಗ ಚಳವಳಿಗೆ ಒಂದು ಹೊಸ ಸಂಚಲನ ಮೂಡಿಸಿದ ಕೆ.ವಿ. ಸುಬ್ಬಣ್ಣ, ಬಿ.ವಿ. ಕಾರಂತರು ಸಂಚರಿಸಿದ ಈ ಸ್ಥಳದಲ್ಲಿ ಧನಾತ್ಮಕ ತರಂಗಗಳು ನಮ್ಮನ್ನು ಎಚ್ಚರಿಸುತ್ತಿವೆ. ಈ ಶಕ್ತಿ ಕರಾವಳಿ ಕಲಾವಿದರಿಗೆ ವರವಾಗಲಿ. ಹೆಚ್ಚು ಹೆಚ್ಚು ರಂಗ ಯೋಜನೆಗಳು ವಿಸ್ತಾರಗೊಳ್ಳಲಿ ಎಂದು ಅವರು ಹೇಳಿದರು. 

ತುಳುಕೂಟದ ಡಾ| ಭಾಸ್ಕರಾನಂದ ಕುಮಾರ್‌ ಅಧ್ಯಕ್ಷತೆ ವಹಿಸಿದ್ದರು. ರಥಬೀದಿ ಗೆಳೆಯರು ಸಂಸ್ಥೆಯ ಪ್ರೊ| ಮುರಳೀಧರ ಉಪಾಧ್ಯ ಹಿರಿಯಡ್ಕ, ಸುಬ್ರಹ್ಮಣ್ಯ ಜೋಷಿ, ಸಂತೋಷ್‌ ಬಲ್ಲಾಳ್‌ ಉಪಸ್ಥಿತರಿದ್ದರು.
ಉಪಾದ್ಯಕ್ಷ ಉದ್ಯಾವರ ನಾಗೇಶ್‌ ಸ್ವಾಗತಿಸಿದರು. ಸಂತೋಷ್‌ ಹಿರಿಯಡ್ಕ ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next