Advertisement

ಕೊಲ್ಲಿ ಉದ್ಯೋಗಿಯ ನಿಗೂಢ ಸಾವು : ನಾಲ್ವರ ವಿಚಾರಣೆ

09:15 PM May 03, 2023 | Team Udayavani |

ಕಾಸರಗೋಡು: ಎಪ್ರಿಲ್‌ 14 ರಂದು ಮನೆಯಲ್ಲಿ ನಿಗೂಢ ರೀತಿಯಲ್ಲಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಕೊಲ್ಲಿ ಉದ್ಯೋಗಿ ಪಳ್ಳಿಕೆರೆ ಪೂಚಕ್ಕಾಡಿನ ಎಂ.ಸಿ.ಅಬ್ದುಲ್‌ ಗಫೂರ್‌ ಹಾಜಿ(55) ಅವರ ಮನೆಯಿಂದ ಒಟ್ಟು 595 ಪವನ್‌ ಚಿನ್ನಾಭರಣ ನಾಪತ್ತೆಯಾಗಿದೆ ಎಂದು ತನಿಖೆಯಲ್ಲಿ ಸ್ಪಷ್ಟಗೊಂಡಿದೆ ಎಂದು ಬೇಕಲ ಪೊಲೀಸರು ತಿಳಿಸಿದ್ದಾರೆ.

Advertisement

ಘಟನೆಗೆ ಸಂಬಂಧಿಸಿ ಅಬ್ದುಲ್‌ ಗಫೂರ್‌ ಅವರ ಮನೆಗೆ ಪದೇ ಪದೇ ಸಂದರ್ಶಿಸುತ್ತಿದ್ದ ಮಹಿಳೆ, ಆಕೆಯ ಪತಿ ಸಹಿತ ನಾಲ್ವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಯುವಕನಿಗೆ ಹಲ್ಲೆ : ಕೇಸು ದಾಖಲು
ಕಾಸರಗೋಡು: ನಾಯಮ್ಮಾರಮೂಲೆ ಪೆಟ್ರೋಲ್‌ ಬಂಕ್‌ ಪರಿಸರದಲ್ಲಿ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ಚೆಂಗಳ ಮುನಂಬ ಹೌಸಿನ ಮೊಹಮ್ಮದ್‌ ಶಹಾಲ್‌(18) ಅವರಿಗೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಸುಹೈಲ್‌ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next