Advertisement
1839ರಲ್ಲಿ ಮಂಗಳೂರಿನಲ್ಲಿ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಅವರ ತಾತ ಸಾಹುಕಾರ್ ನಾರಾಯಣ ಪೈ ಅವರು ಸಹಸ್ರ ಭೋಜನ (ಸಹಪಂಕ್ತಿ ಭೋಜನ) ನಡೆಸಿದ್ದರು.
ಕಾರ್ಯಕ್ರಮ ಉದ್ಘಾಟಿಸಿದ ಮಂಜೇಶ್ವರ ತಹಶೀಲ್ದಾರ್ ಜಾನ್ ವರ್ಗೀಸ್ ಪಿ. ಮಾತನಾಡಿ, ಸಮಾಜದ ಪಿಡುಗುಗಳ ವಿರುದ್ಧ 180 ವರ್ಷಗಳ ಹಿಂದೆಯೇ ಧ್ವನಿ ಎತ್ತಿದ್ದ ಸಾಹುಕಾರ್ ನಾರಾಯಣ ಪೈಗಳಿಂದ ಮಂಜೇಶ್ವರ ಗೋವಿಂದ ಪೈ ಅವರ ವರೆಗಿನ ಸಾಧಕರ ಕೊಡುಗೆ ಅನನ್ಯ ಎಂದು ತಿಳಿಸಿದರು. ಭಾರತದ ಅಖಂಡತೆ ಕಾಯ್ದುಕೊಳ್ಳುವಲ್ಲಿ ಕಾವ್ಯಧಾರೆ ಹರಿಸಿದ್ದ ಗೋವಿಂದ ಪೈ ಅವರ ನಿವಾಸವೇ ಒಂದು ಅಶ್ರಮವಾಗಿತ್ತು ಎಂದರು.
Related Articles
ಕೇರಳ ತುಳು ಅಕಾಡೆಮಿ ಅಧ್ಯಕ್ಷ ಉಮೇಶ್ ಎಂ. ಸಾಲ್ಯಾನ್, ಮಂಜೇಶ್ವರ ತಾಲೂಕು ನಾಗರಿಕ ಪೂರೈಕೆ ಅಧಿಕಾರಿ ಎ. ಅಬ್ದುಲ್ ಜಬ್ಟಾರ್ ಮುಖ್ಯ ಅತಿಥಿಗಳಾಗಿದ್ದರು. ಡಾ| ಕೆ. ಕಮಲಾಕ್ಷ ಸ್ವಾಗತಿಸಿದರು. ಬಾಲಕೃಷ್ಣ ಶೆಟ್ಟಿಗಾರ್ ವಂದಿಸಿದರು.
Advertisement