Advertisement

CM Siddaramaiah: ಹಿಂದೆ ಮುಂದೆ ಇದ್ದವರಿಂದಲೇ ಖೆಡ್ಡಾ; ಅಶೋಕ

06:57 PM Oct 04, 2024 | Team Udayavani |

ಚಿತ್ರದುರ್ಗ:ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಹಿಂದೆ ಮುಂದೆ ಇದ್ದವರೇ ಅವರಿಗೆ ಖೆಡ್ಡಾ ತೋಡಿದ್ದಾರೆ. ಮುಡಾ ಅಧ್ಯಕ್ಷ ಮರೀಗೌಡ ಸಿದ್ದರಾಮಯ್ಯ ಅವರ ರೈಟ್‌ ಹ್ಯಾಂಡ್‌. ಅವರ ತವರಿನಲ್ಲೇ ಈ ವಿಚಾರ ಬೆಳಕಿಗೆ ಬಂದಿದೆ ಎಂದು ವಿಪಕ್ಷ ನಾಯಕ ಆರ್‌.ಅಶೋಕ ಆರೋಪಿಸಿದರು.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಡಾದಲ್ಲಿ 2-3 ಸಾವಿರ ಕೋಟಿ ಅವ್ಯವಹಾರ ಆಗಿದೆ ಎಂದು ಪತ್ರ ಬರೆದಿದ್ದು ಯಾರು? ಸಿದ್ದರಾಮಯ್ಯ ಪತ್ನಿ ಹೆಸರಿನಲ್ಲಿದ್ದ ನಿವೇಶನಗಳ ಬೆಲೆ 62 ಕೋಟಿ ಎಂದು ಹೇಳಿದ್ದು ಯಾರು? ನಾವ್ಯಾರು ಬೆಲೆ ಕಟ್ಟಿರಲಿಲ್ಲ. ತನಿಖೆ ಮಾಡಲು ಪತ್ರ ಬರೆದವರೇ ಕಾಂಗ್ರೆಸ್ಸಿನವರು. ಸಂಗೊಳ್ಳಿ ರಾಯಣ್ಣ ಕಾರ್ಯಕ್ರಮದಲ್ಲಿ ಮಾತನಾಡುವಾಗ ನನ್ನ ಬೆನ್ನ ಹಿಂದೆ ಇರುವವರೇ ಚೂರಿ ಹಾಕುತ್ತಾರೆ. ಸಂಗೊಳ್ಳಿ ರಾಯಣ್ಣನಿಗೂ ಹೀಗೆ ಮಾಡಿದ್ದರು ಎಂದು ಭಾಷಣ ಮಾಡಿದ್ದರು ಎಂದರು.

 

 

Advertisement

Udayavani is now on Telegram. Click here to join our channel and stay updated with the latest news.

Next