Advertisement

ಮಂತ್ರಿ ಸ್ಥಾನ ಮಖ್ಯಮಂತ್ರಿಗಳ ಪರಮಾಧಿಕಾರ: ಸಿ.ಸಿ.ಪಾಟೀಲ

09:53 AM Jan 13, 2020 | keerthan |

ವಿಜಯಪುರ: ಸಂಪುಟ ವಿಸ್ತರಣೆ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪರಮಾಧಿಕಾರವಿದೆ. ಸಚಿವ ಸಂಪುಟ ಪುನಾರಚನೆ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದರು.

Advertisement

ಪಂಚಮಸಾಲಿ ಸಮುದಾಯಕ್ಕೆ‌ ಸಚಿವ ಸ್ಥಾನಕ್ಕಾಗಿ ಸ್ವಾಮೀಜಿ ಆಗ್ರಹಿಸಿರುವುದು, ಸಮಾಜದ ಗುರುಗಳಾಗಿ ಬೇಡಿಕೆ ಸಲ್ಲಿಸುವುದು ಸಹಜ. ಈ ವಿಷಯದಲ್ಲಿ ನಾನೇನು ಹೇಳುವುದಿಲ್ಲ. ಎಲ್ಲರಿಗೂ ಸಚಿವರಾಗಬೇಕು ಅನ್ನೋ ಆಸೆ ಇರುತ್ತೆ. ಆದರೆ ಸಚಿವರನ್ನಾಗಿ ಮಾಡೋದು ಬಿಡೋದು ಮುಖ್ಯಮಂತ್ರಿ ಹಾಗೂ ಹೈಕಮಾಂಡ್ ಗೆ ‌ಬಿಟ್ಟ ವಿಚಾರ. ಇದಕ್ಕೆ ಪ್ರತಿಕ್ರಯಿಸುವಷ್ಟು ನಾನು ದೊಡ್ಡವನಲ್ಲ ಎಂದರು.

ವಿಜಯಪುರ ‌ಜಿಲ್ಲಾ ಬಿಜೆಪಿ ಬಣ ರಾಜಕೀಯ ಬಗ್ಗೆ ನನಗೆ ಮಾಹಿತಿ‌‌ ಇಲ್ಲ. ನನಗೆ ಎಲ್ಲರೂ ಸ್ನೇಹಿತರೇ, ಕಾಂಗ್ರೆಸ್‌ ಪಕ್ಷದ ಶಾಸಕರು ಸಹ ನನಗೆ ಸ್ನೇಹಿತರಿದ್ದಾರೆ. ಮುಖ್ಯಮಂತ್ರಿಗಳು ಜ.16 ರಂದು ವಿಜಯಪುರಕ್ಕೆ ಬರುತ್ತಿರುವ ಕಾರಣ ಅಧಿಕಾರಿಗಳ ಜೊತೆ ಸಭೆ ಮಾಡಿ ಸಿದ್ದತೆಗಳ ಪರಿಶೀಲನೆ ಮಾಡುತ್ತಿದ್ದೇನೆ. ಜ.18 ರಂದು ಅಮಿತ್‌ ಶಾ ರಾಜ್ಯಕ್ಕೆ ಆಗಮಿಸುತ್ತಾರೆ. ಈ ಕುರಿತು ಸಿದ್ಧತೆ ಪರಿಶೀಲನೆ ನಡೆಸಲಾಗುತ್ತಿದೆ ಎಂದರು

Advertisement

Udayavani is now on Telegram. Click here to join our channel and stay updated with the latest news.

Next