Advertisement

ಸಿಎಂ ಗ್ರಾಮ ವಾಸ್ತವ್ಯ; ಕುಗ್ರಾಮಕ್ಕೆ ಶೋಧ

11:22 PM Jun 05, 2019 | Team Udayavani |

ಕಲಬುರಗಿ: ಮುಖ್ಯಮಂತ್ರಿ ಕುಮಾರಸ್ವಾಮಿಯವರು ಜೂ.22ರಂದು ಜಿಲ್ಲೆಯ ಅಫಜಲಪುರ ತಾಲೂಕಿನಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದು, ಕುಗ್ರಾಮ ಆಯ್ಕೆಗೆ ಶೋಧ ಕಾರ್ಯ ನಡೆದಿದೆ. ಈ ಮೊದಲು ಅತನೂರು ಗ್ರಾಮವನ್ನು ಆಯ್ಕೆ ಮಾಡಲಾಗಿತ್ತು.

Advertisement

ಗ್ರಾಮಕ್ಕೆ ಎಲ್ಲ ರೀತಿಯ ಸೌಲಭ್ಯಗಳು ಇರುವುದರಿಂದ ಆ ಗ್ರಾಮದ ಬದಲಾಗಿ ಕುಗ್ರಾಮವನ್ನು ಆಯ್ಕೆ ಮಾಡಲು ಸಿಎಂ ಅವರು ಶಾಸಕ ಎಂ.ವೈ.ಪಾಟೀಲಗೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹೊಸ ಗ್ರಾಮ ಆಯ್ಕೆಗೆ ವ್ಯಾಪಕ ಪರಿಶೀಲನೆ ನಡೆದಿದೆ. ಗುರುವಾರ ಶಾಸಕರು ಹಾಗೂ ಅಧಿಕಾರಿಗಳು ಸಭೆ ಸೇರಿ ಗ್ರಾಮ ಆಯ್ಕೆ ಕುರಿತು ಸಮಾಲೋಚನೆ ನಡೆಸಲಿದ್ದಾರೆ.

ಇನ್ನೊಂದೆಡೆ ಈಗಲೇ ಗ್ರಾಮ ವಾಸ್ತವ್ಯದ ಸ್ಥಳ ಬೇಡ. ಒಂದೆರಡು ದಿನ ಬಾಕಿ ಇರುವಾಗ ಮಾತ್ರ ಸ್ಥಳ ಅಂತಿಮಗೊಳಿಸಲು ಸಿಎಂ ಉದ್ದೇಶಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಸಿಎಂ ವಾಸ್ತವ್ಯ ಸ್ಥಳ ಅಂತಿಮಗೊಳಿಸುವ ಕುರಿತು ಶಾಸಕರು ಹಾಗೂ ಅಧಿಕಾರಿಗಳಲ್ಲಿ ತೀವ್ರ ಗೊಂದಲ ಹಾಗೂ ಆಸಕ್ತಿ ಮೂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next