Advertisement

ಸಿಎಂ, ಪ್ರಕಾಶ್‌ ರೈಗೆ ಪ್ರಸ್‌ಕ್ಲಬ್‌ ವರ್ಷದ ವ್ಯಕ್ತಿ ಪ್ರಶಸ್ತಿ

07:35 AM Dec 22, 2017 | Team Udayavani |

ಬೆಂಗಳೂರು: ಬೆಂಗಳೂರು ಪ್ರಸ್‌ ಕ್ಲಬ್‌ನ ಪ್ರಸಕ್ತ ಸಾಲಿನ “ಪ್ರಸ್‌ ಕ್ಲಬ್‌ ವರ್ಷದ ವ್ಯಕ್ತಿ ಪ್ರಶಸ್ತಿ’ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನಟ ಪ್ರಕಾಶ್‌ ರೈ ಅವರನ್ನು ಆಯ್ಕೆ ಮಾಡಲಾಗಿದೆ. ಜತೆಗೆ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರನ್ನು “ಶತಮಾನದ ಶ್ರೀಗಳು’ ಎಂದು ಸನ್ಮಾನಿಸಲು ನಿರ್ಧರಿಸಲಾಗಿದೆ.

Advertisement

ಪ್ರಸ್‌ಕ್ಲಬ್‌ನಲ್ಲಿ ಗುರುವಾರ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಲಾಗಿದೆ. ಈ ಬಾರಿ ವಿಶೇಷವಾಗಿ ಶಿವಕುಮಾರ ಸ್ವಾಮೀಜಿ ಅವರನ್ನು ಅಭಿನಂದಿಸಲು ಸಮಿತಿ ನಿರ್ಧರಿಸಿದ್ದು, 11 ಮಂದಿಯನ್ನು ಪ್ರಸ್‌ಕ್ಲಬ್‌ ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಹಿರಿಯ ಪತ್ರ ಕರ್ತರಾ ದ ಡಾ.ಎ.ಸೂರ್ಯಪ್ರಕಾಶ್‌, ರಾಜಾ ಶೈಲೇಶ್‌ಚಂದ್ರ ಗುಪ್ತ, ಅರೆಕೆರೆ ಜಯರಾಮ್‌, ಬಿ.ವಿ.ಮಲ್ಲಿಕಾರ್ಜುನಯ್ಯ, ಸುಗತ ಶ್ರೀನಿವಾಸರಾಜು, ಈಶ್ವರ್‌ ದೈತೋಟ, ಎಚ್‌.ಆರ್‌.ರಂಗನಾಥ್‌, ಆಯೇಷಾ ಖಾನಂ,ಕೆ.ವೆಂಕಟೇಶ್‌, ವಿ.ರಾಮಸ್ವಾಮಿ ಕಣ್ವ, ಮಂಜುನಾಥ ಅದ್ದೆ ಅವರನ್ನು “ಪ್ರಸ್‌ಕ್ಲಬ್‌ ವಾರ್ಷಿಕ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಡಿ.31ರಂದು ಬೆಳಗ್ಗೆ 10 ಗಂಟೆಗೆ ಪ್ರಸ್‌ಕ್ಲಬ್‌ ಆವರಣದಲ್ಲಿ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next