Advertisement

ಗುರುಪ್ರಿಯಾ ಸೇತುವೆ ಉದ್ಘಾಟಿಸುವ ಒಡಿಶಾ ಸಿಎಂ ನವೀನ್‌ ಪಟ್ಟನಾಯಕ್‌

11:45 AM May 15, 2018 | Team Udayavani |

ಹೊಸದಿಲ್ಲಿ : ಒಡಿಶಾದ ಮಾವೋವಾದಿ ಪೀಡಿತ, ಅತ್ಯಂತ ದುರ್ಗಮ, ಮಲ್ಕಾನ್‌ಗಿರಿ ಜಿಲ್ಲೆಯನ್ನು ರಾಜ್ಯದ ಮುಖ್ಯ ವಾಹಿನಿಯೊಂದಿಗೆ ಜೋಡಿಸುವ ಗುರುಪ್ರಿಯಾ ಸೇತುವೆಯನ್ನು ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ಟನಾಯಕ್‌ ಮುಂದಿನ ತಿಂಗಳು ಉದ್ಘಾಟಿಸಲಿದ್ದಾರೆ.

Advertisement

910 ಮೀಟರ್‌ ಉದ್ದದ ಗುರುಪ್ರಿಯಾ ಸೇತುವೆಯ ನಿರ್ಮಾಣ ಕಾರ್ಯ ಬಹುತೇಕ ಮುಗಿದಿದ್ದು ಇದೀಗ ಬಾಕಿ ಇರುವ ಸಣ್ಣಪುಟ್ಟ ಕೆಲಸಗಳು ಈ ತಿಂಗಳಾಂತ್ಯದೊಳಗೆ ಮುಗಿಯಲಿವೆ ಎಂದು ರಾಜ್ಯದ ಕಾಮಗಾರಿ ಸಚಿವ ಪ್ರಫ‌ುಲ್ಲ ಮಲ್ಲಿಕ್‌ ಅವರು ಸಚಿವಾಲಯದಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ಹೇಳಿದರು. 

ಸಭೆಯಲ್ಲಿ ಮುಖ್ಯಮಂತ್ರಿಗಳು ಸೇತುವೆ ಕಾಮಗಾರಿಯ ಪ್ರಗತಿಯನ್ನು ಅವಲೋಕಿಸಿದರು ಎಂದು ಸಚಿವಾಲಯದ ಮೂಲಗಳು ತಿಳಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next