Advertisement

ಕಲಬುರಗಿ ವಿಮಾನ ನಿಲ್ದಾಣ ಕ್ಕೆ ಬಂದಿಳಿದ ಸಿಎಂ

09:37 AM Nov 23, 2019 | sudhir |

ಕಲಬುರಗಿ: ವಿಮಾನ ನಿಲ್ದಾಣ ಉದ್ಘಾಟನೆ ನೆಗೆ ಆಗಮಿಸಿದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ.

Advertisement

ಸ್ಟಾರ್ ಏರ್ ಮೂಲಕ ನಿಲ್ದಾಣಕ್ಕೆ ಸಿಎಂ ಬಂದಿಳಿಯುತ್ತಿದ್ದಂತೆ ಪಕ್ಷದ ಮುಖಂಡರು ಮೋದಿಗೆ ಜಯವಾಗಲಿ, ಯಡಿಯೂರಪ್ಪ ಜಯವಾಗಲಿ ಎಂದು ಘೋಷಣೆ ಕೂಗಿದರು.

ನಂತರ ಸಿಎಂ ಅವರು ನಿಲ್ದಾಣದೊಳಗಿನ ತಪಾಸಣಾ ವಿಭಾಗದ ಎದುರು ಕೇಕ್ ನ್ನು ಕತ್ತರಿಸಿದರು.
ಈ ಸಂದರ್ಭದಲ್ಲಿ ಡಿಸಿಎಂ ಗೋವಿಂದ ಕಾರಜೋಳ, ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಸಂಸದರಾದ ಡಾ. ಉಮೇಶ್ ಜಾಧವ್, ಭಗವಂತ ಖೂಬಾ, ಶಾಸಕರಾದ ದತ್ತಾತ್ರೇಯ ಪಾಟೀಲ್, ಬಸವರಾಜ್ ಮತ್ತಿಮಡು ಸೇರಿದಂತೆ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next