Advertisement

ದೇಶದಲ್ಲೇ ಹೆಚ್ಚು ಕಣ್ಣೀರು ಸುರಿಸೋ ಸಿಎಂ ಕುಮಾರಸ್ವಾಮಿ

10:52 PM Apr 09, 2019 | Team Udayavani |

ಚಿಂಚೋಳಿ: ರಾಜ್ಯದ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹಗಲು -ರಾತ್ರಿ ಎನ್ನದೇ ದೇಶದಲ್ಲಿಯೇ ಹೆಚ್ಚು ಕಣ್ಣೀರು ಸುರಿಸುವ ಮುಖ್ಯಮಂತ್ರಿ ಆಗಿದ್ದಾರೆ ಎಂದು ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಶಿವರಾಜಸಿಂಗ್‌ ಚವ್ಹಾಣ ವ್ಯಂಗ್ಯವಾಡಿದರು.

Advertisement

ಪಟ್ಟಣದ ಪೊಲೀಸ್‌ ಪರೇಡ ಮೈದಾನದಲ್ಲಿ ಮಂಗಳವಾರ ಬೀದರ ಲೋಕಸಭೆ ಮತಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿ, ಕುಮಾರಸ್ವಾಮಿ ಅವರು ರೈತರಿಗೆ ನೀಡಿದ ಭರವಸೆಯಂತೆ ರೈತರ ಸಾಲ ಮನ್ನಾ ಮಾಡಿಲ್ಲ.

ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರಕಾರ ಜನರಿಗೆ ಮೋಸ ಮಾಡಿದೆ. ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದಾಗ ಮುಂಬೈ ನಗರದಲ್ಲಿ ಭಯೋತ್ಪಾದಕರ ದಾಳಿ ನಡೆಯಿತು. ಆದರೆ ಪುಲ್ವಾಮಾದಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯಿಂದಾಗಿ ನಮ್ಮ ದೇಶದ ಸೈನಿಕರು ಏರ್‌ಸ್ಟ್ರೆ çಕ್‌ ಮೂಲಕ ಬಾಲಾಕೋಟ ಮೇಲೆ ದಾಳಿ ನಡೆಸಿದರು.

ದೇಶದ ಸುರಕ್ಷತೆ ಬಿಜೆಪಿ ಮುಖ್ಯ ಉದ್ದೇಶವಾಗಿದೆ. ಭಯೊತ್ಪಾದಕರು ಎಲ್ಲಿಯೇ ಅಡಗಿದ್ದರೂ ಅವರ ಹುಟ್ಟಡಗಿಸುತ್ತೇವೆ ಎಂದರು. ಬೀದರ ಸಂಸದ ಭಗವಂತ ಖೂಬಾ ಮಾತನಾಡಿ, ಈಶ್ವರ ಖಂಡ್ರೆ ಭಾಲ್ಕಿ ಶಾಸಕರು ಆಗಿದ್ದರೂ ಏನೂ ಅಭಿವೃದ್ಧಿ ಕೆಲಸ ಮಾಡಿಲ್ಲ. ಬರೀ ಮಲಗಲು ಮಾತ್ರ ಭಾಲ್ಕಿಗೆ ಹೋಗುತ್ತಾರೆ. ಜನರ ಸಮಸ್ಯೆಗೆ ಸ್ಪಂದಿಸಲಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next