Advertisement

‘ಈ ಸಿನೇಮಾ ಜನ ಮಂಡ್ಯ ಜನರಿಗೆ ಏನು ಮಾಡ್ತಾರೋ ನೋಡೋಣ’

08:03 AM Mar 18, 2019 | Team Udayavani |

ಚಿಕ್ಕಮಗಳೂರು: ಸುಮಲತಾ ಅಂಬರೀಷ್‌ ಅವರು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಚಿತವಾಗುತ್ತದ್ದಂತಯೇ ಈ ಬಾಗದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಲಾರಂಭಿಸಿದೆ. ಇತ್ತ ಸುಮಲತಾ ಅವರ ಉಮೇದುವಾರಿಕೆಗೆ ಕನ್ನಡ ಚಿತ್ರರಂಗ ಬೆಂಬಲ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಶೃಂಗೇರಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ‘ಚಿತ್ರರಂಗದವರೆಲ್ಲಾ ಮಂಡ್ಯದ ಕಡೆಗೆ ಬರಲಾರಂಭಿಸಿದ್ದಾರೆ. ಸಿನೆಮಾದವರು ಮಂಡ್ಯದ ಕಡೆಗೆ ಬರಲಿ ಬಿಡಿ ; ಜನಗಳಿಗೆ ಅವರೇನು ಮಾಡುತ್ತಾರೋ ನೋಡೋಣ’ ಎಂದು ಮುಖ್ಯಮಂತ್ರಿಯವರು ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಚಿಕ್ಕಮಗಳೂರಿನ ಮೆಣೆಸೆ ಹೆಲಿಪ್ಯಾಡ್‌ ನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ‘ಸುಮಲತಾ ಅವರ ಸ್ಪರ್ಧೆಗೆ ವಿಶೇಷವಾಗಿ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಯಾರು ಏನೇ ಮಾಡಿದರೂ ಮಂಡ್ಯದ ಜನತೆ ನಮ್ಮ ಕೈ ಬಿಡುವುದಿಲ್ಲ ಎಂಬ ವಿಶ್ವಾಸ ನಮಗಿದೆ’ ಎಂದು ಕುಮಾರಸ್ವಾಮಿಯವರು ಆತ್ಮವಿಶ್ವಾಸದಿಂದ ನುಡಿದರು.

ಕುಮಾರಸ್ವಾಮಿ ಇಂದು ಕುಟುಂಬ ಸಮೇತ ಶೃಂಗೇರಿ ಶಾರದಾಂಬೆ ದರ್ಶನಕ್ಕೆ ತೆರಳಿದ್ದು, ಅಲ್ಲಿ ಮಗ ನಿಖಿಲ್‌ ಅವರ ನಾಮಪತ್ರಕ್ಕೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಇದೀಗ ನಿಖಿಲ್‌ ಮತ್ತು ಸುಮಲತಾ ನಡುವೆ ಸ್ಪರ್ಧೆ ಫಿಕ್ಸ್‌ ಆಗಿದ್ದು, ಮಂಡ್ಯ ಮತದಾರ ಯಾರ ಕೈ ಹಿಡಿಯುತ್ತಾನೆ ಎಂಬ ಕುತೂಹಲ ಇದೀಗ ರಾಜ್ಯದ ಜನತೆಯದ್ದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next