Advertisement

ಸಿಎಂ ಕುಮಾರಸ್ವಾಮಿಯೇ ಎ 1 ಆರೋಪಿ: ಶೆಟ್ಟರ್‌

01:24 AM Feb 13, 2019 | Team Udayavani |

ವಿಧಾನಸಭೆ: ಆಪರೇಷನ್‌ ಆಡಿಯೋ ಪ್ರಕರಣದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯೇ ಎ1 ಆರೋಪಿಯಾಗಿದ್ದಾರೆ. ಸಭಾಧ್ಯಕ್ಷರ ವಿರುದಟಛಿ ಆರೋಪ ಕೇಳಿ ಬಂದರೂ, ಅವರ ಗಮನಕ್ಕೆ ತಾರದೇ ನೇರವಾಗಿ ಮಾಧ್ಯಮಗಳಿಗೆ ಬಹಿರಂಗಗೊಳಿಸಿ, ಸಭಾಧ್ಯಕ್ಷರನ್ನು ಬೀದಿಗೆ ತಂದಿದ್ದಾರೆ ಎಂದು ಮಾಜಿ ಸಿಎಂಜಗದೀಶ ಶೆಟ್ಟರ್‌ ಆರೋಪಿಸಿದರು.

Advertisement

ಆಡಿಯೋ ಪ್ರಕರಣವನ್ನು ಯಾವ ತನಿಖೆಗೆ ಒಪ್ಪಿಸಬೇಕು ಎನ್ನುವ ಕುರಿತು ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿ ಆಡಿಯೋ ಟೇಪ್‌ನಲ್ಲಿ ಸ್ಪೀಕರ್‌ ಬಗ್ಗೆ ಪ್ರಸ್ತಾಪವಾಗಿದೆ ಎಂದು ಗೊತ್ತಿದ್ದರೂ, ಅದನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿ ಅಪರಾಧ ಮಾಡಿದ್ದಾರೆ ಎಂದು ದೂರಿದರು. ಮಾತು ಮುಂದುವರಿಸಿದ ಶೆಟ್ಟರ್‌, ಕುಮಾರಸ್ವಾಮಿಯವರೇ ಆಡಿಯೋ ಬಹಿರಂಗಪಡಿಸಿದ್ದಾರೆ.

ಯಡಿಯೂರಪ್ಪ ಅವರ ಬಳಿ ಕಳುಹಿಸಿದ್ದು ನಾನೇ ಎಂದು ಹೇಳಿದ್ದಾರೆ. ಹೀಗಾಗಿ, ಕುರ್ಚಿ ಉಳಿಸಿಕೊಳ್ಳಲು ಈ ಎಲ್ಲ ಪ್ರಹಸನ ಸೃಷ್ಟಿಸಿದ್ದಾರೆ ಎಂದು ದೂರಿದರು. ಈ ವೇಳೆ ಮಧ್ಯಪ್ರವೇಶಿಸಿದ ಕುಮಾರಸ್ವಾಮಿ, ನೀವು ಸನ್ಯಾಸಿ ಅಲ್ಲ ಎಂದು ಹೇಳಿದ್ದೀರಿ, ನಾನೂ ಸನ್ಯಾಸಿಯಲ್ಲ. ರಾಜಕೀಯ ಲಾಭಕ್ಕಾಗಿಯೇ ಮಾಡಿದ್ದೇನೆ. ಬಿಜೆಪಿಯವರು ಯಾವುದೇ ಆಪರೇಷನ್‌ ಕಮಲ ಮಾಡುತ್ತಿಲ್ಲ ಎಂದು ಹೇಳುತ್ತಿದ್ದರು. ಅದನ್ನು ರಾಜ್ಯದ ಜನತೆಗೆ ತೋರಿಸಲು ಈ ರೀತಿ ಮಾಡಿದ್ದೇನೆಂದು ತಿರುಗೇಟು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next