Advertisement

ಕೋವಿಡ್ ಓಡಿಸಲು ಸಿಎಂ ನವಸೂತ್ರ

12:32 AM Oct 29, 2020 | mahesh |

ಬೆಂಗಳೂರು: ಸದ್ಯ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖದ ಹಾದಿಯಲ್ಲಿದ್ದರೂ ಚಳಿಗಾಲದ ಆತಂಕ ಕಾಡುತ್ತಿದೆ. ಹಬ್ಬಗಳ ಋತು ಮತ್ತು ಚಳಿಗಾಲದ ಹಿನ್ನೆಲೆಯಲ್ಲಿ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಿ ಸಿಎಂ ಯಡಿಯೂರಪ್ಪ ಅವರು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕೊರೊನಾ ನಿಯಂತ್ರಣಕ್ಕಾಗಿ ನವ ಸೂತ್ರಗಳನ್ನು ನೀಡಿದ್ದಾರೆ.

Advertisement

ಈ ಸಂಬಂಧ ಎಲ್ಲ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಿಎಂ ಪತ್ರ ಬರೆದಿದ್ದಾರೆ. ನಿಯಂತ್ರಣ ಕ್ರಮಗಳ ಅನುಷ್ಠಾನ ವರದಿಯನ್ನು ಪ್ರತೀ ವಾರ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.

01- ಗ್ರಾಮ ಮತ್ತು ನಗರ ಪ್ರದೇಶಗಳಲ್ಲಿ ಬೂತ್‌ ಮಟ್ಟದ ಸಮಿತಿ ಕ್ರಿಯಾಶೀಲಗೊಳಿಸುವುದು. ಅವುಗಳ ಕಾರ್ಯ ಪರಾಮರ್ಶಿಸುವುದು.

02- ಪ್ರಾಥಮಿಕ ಸಂಪರ್ಕಿತರು ಕಡ್ಡಾಯವಾಗಿ ಪರೀಕ್ಷೆಗೆ ಒಳಗಾಗುವಂತೆ ಕ್ರಮ ವಹಿಸಬೇಕು.

03- ಸಹ ರೋಗ ಹೊಂದಿರುವ ಹಿರಿಯ ನಾಗ ರಿಕರ ಆರೋಗ್ಯದ ಬಗ್ಗೆ ನಿಗಾ.

Advertisement

04- ಹೋಂ ಐಸೋಲೇಶನ್‌ ಮತ್ತು ಹೋಮ್‌ ಕ್ವಾರಂಟೈನ್‌ನಲ್ಲಿ ಇರುವವರ ಆರೋಗ್ಯದ ಮೇಲೆ ನಿಗಾ.

05- ಐಸಿಯುವಿನಲ್ಲಿರುವ ರೋಗಿಗಳಿಗಾಗಿ ತಜ್ಞರೊಂದಿಗೆ ಟೆಲಿ ಐಸಿಯು ವ್ಯವಸ್ಥೆ ಬಳಕೆ ಮಾಡಿ, ಉತ್ತಮ ಚಿಕಿತ್ಸೆ ನೀಡಿ ಹೆಚ್ಚು ಸಾವು ಸಂಭವಿಸದಂತೆ ನೋಡಿಕೊಳ್ಳುವುದು,

06- 24 ತಾಸುಯೊಳಗೆ ವೈದ್ಯರು ರೋಗಿಗಳ ಡೆತ್‌ ಆಡಿಟ್‌ ವರದಿಯನ್ನು ಸಲ್ಲಿಕೆ ಮಾಡುವುದು.

07- ಮಾಸ್ಕ್ ಧರಿಸುವಿಕೆ ಮತ್ತು ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ನೋಡಿಕೊಳ್ಳುವುದು. ದಂಡ ಪ್ರಮಾಣದ ಬಗ್ಗೆ ಅರಿವು ಮೂಡಿಸುವುದು.

08- ಕೊರೊನಾ ನಿಯಮ ಉಲ್ಲಂ ಸುವವರ ವಿರುದ್ಧ ಪೊಲೀಸ್‌ ಇಲಾಖೆ ಮೂಲಕ ಕ್ರಮ ಜರುಗಿಸುವುದು.

09- ಸ್ಥಳೀಯ ಧಾರ್ಮಿಕ ಗುರುಗಳ ಮೂಲಕ ಜನರ ಮನಸ್ಸಿನಲ್ಲಿನ ಕೊರೊನಾ ಭಯ ಹೋಗಲಾಡಿಸುವುದು.

Advertisement

Udayavani is now on Telegram. Click here to join our channel and stay updated with the latest news.

Next