Advertisement

ಹೇಮಂತ್‌ ಸೊರೇನ್‌ ಭವಿಷ್ಯ ಇನ್ನೂ ಸಸ್ಪೆನ್ಸ್‌; ರಾಂಚಿಯಲ್ಲಿ ಬಿರುಸಿನ ಸಮಾಲೋಚನೆ

10:32 PM Aug 26, 2022 | Team Udayavani |

ರಾಂಚಿ: ಅಕ್ರಮವಾಗಿ ಗಣಿ ಪರವಾನಗಿ ಪಡೆದಿರುವ ಆರೋಪ ಹೊತ್ತಿರುವ ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಅವರ ಅನರ್ಹತೆಯ ಬಗ್ಗೆ ಇನ್ನೂ ಅಧಿಕೃತ ನಿರ್ಧಾರ ಪ್ರಕಟವಾಗಿಲ್ಲ.

Advertisement

ಭಾರತೀಯ ಚುನಾವಣಾ ಆಯೋಗ ಗುರುವಾರವೇ ಮೊಹರು ಮಾಡಿದ ಲಕೋಟೆಯಲ್ಲಿ ಶಿಫಾರಸನ್ನು ರಾಜ್ಯಪಾಲ ರಮೇಶ್‌ ಬೈಸ್‌ ಅವರಿಗೆ ಕಳುಹಿಸಿಕೊಟ್ಟಿದೆ. ಅವರು ಈ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ. ಒಂದು ವೇಳೆ ಅವರು ಸೊರೇನ್‌ ಶಾಸಕನಾಗಿ ಮುಂದುವರಿಯಲು ಅನರ್ಹ ಎಂದು ನಿರ್ಧರಿಸಿದರೆ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲೇಬೇಕಾಗುತ್ತದೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಸಿಎಂ ಹೇಮಂತ್‌ ಸೊರೇನ್‌ ಅವರು, “ನಾನು ಹುದ್ದೆಗೆ ಆಸೆಪಟ್ಟವನಲ್ಲ’ ಎಂದು ಬರೆದುಕೊಂಡಿದ್ದಾರೆ. ಬಿಜೆಪಿಯವರು ಸಾಂವಿಧಾನಿಕ ಸಂಸ್ಥೆಗಳನ್ನು ಬಳಸಿಕೊಂಡು ನಮ್ಮ ವಿರುದ್ಧ ಕುತಂತ್ರಗಳನ್ನು ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.

ತುರ್ತು ಸಭೆ:
ಅನಿಶ್ಚಿತತೆಯ ನಡುವೆಯೇ ಮುಖ್ಯಮಂತ್ರಿ ನಿವಾಸದಲ್ಲಿ ಯುಪಿಎ ಶಾಸಕ ಸಭೆ ನಡೆಯಿತು. ಶನಿವಾರವೂ ಸಭೆ ಮುಂದುವರಿಯಲಿದೆ ಎಂದು ಶಾಸಕಿ ಪೂರ್ಣಿಮಾ ನೀರಜ್‌ ಸಿಂಗ್‌ ತಿಳಿಸಿದ್ದಾರೆ. ಹೇಮಂತ್‌ ಸೊರೇನ್‌ ಅವರೇ 2024ರ ವರೆಗೆ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ ಎಂದು ಜೆಎಂಎಂ ವಿಶ್ವಾಸ ವ್ಯಕ್ತಪಡಿಸಿದೆ.

ಮತ್ತೆ ಸಿಎಂ ಆಗಲು ಅವಕಾಶ ಇದೆ
ಒಂದು ವೇಳೆ ಸೊರೇನ್‌ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರೂ ಅವರಿಗೆ ಮತ್ತೆ ಮುಖ್ಯಮಂತ್ರಿಯಾಗುವುದಕ್ಕೆ ಅವಕಾಶವಿದೆ. ಇನ್ನು ಆರು ತಿಂಗಳೊಳಗೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರೆ ಅವರು ಮುಖ್ಯಮಂತ್ರಿಯಾಗಬಹುದು. ಚುನಾವಣಾ ಆಯೋಗವು ಸೊರೇನ್‌ ಅವರು ಚುನಾವಣೆಯಲ್ಲಿ ಸ್ಪರ್ಧಿಸದಿರುವಂತೆ ನಿರ್ಬಂಧ ಹೇರಲು ಶಿಫಾರಸು ಮಾಡಿಲ್ಲ ಎಂದು ಹೇಳಲಾಗುತ್ತಿದೆ. ಅವರಿಗೆ ನಿರ್ಧಾರದ ವಿರುದ್ಧ ಕಾನೂನು ಹೋರಾಟ ನಡೆಸುವ ಅವಕಾಶವೂ ಇದೆ.

Advertisement

81- ಒಟ್ಟು ಸ್ಥಾನ
41- ಬಹುಮತಕ್ಕೆ
30- ಜೆಎಂಎಂ
18- ಕಾಂಗ್ರೆಸ್‌
01- ಆರ್‌ಜೆಡಿ
26- ಬಿಜೆಪಿ
02- ಎಜೆಎಸ್‌ಯು ಪಾರ್ಟಿ
04- ಇತರರು

Advertisement

Udayavani is now on Telegram. Click here to join our channel and stay updated with the latest news.

Next