Advertisement

ಸಿಎಂಗೆ ಶಕ್ತಿ ಕಡಿಮೆ, ಭಾರ ಹೆಚ್ಚಿದೆ

06:40 AM Jul 17, 2018 | Team Udayavani |

ಬೆಳಗಾವಿ: ಕುಮಾರಸ್ವಾಮಿ ಅವರಿಗೆ ಶಕ್ತಿ ಕಡಿಮೆಯಿದೆ. ಆದರೆ ಭಾರ ಬಹಳ ಹೆಚ್ಚಾಗಿದೆ. ಹೀಗಾಗಿ ಅವರು ಒತ್ತಡದಲ್ಲಿ ಇರುವಂತಾಗಿದೆ ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಒಬ್ಬ ವ್ಯಕ್ತಿಗೆ ಕೆಲಸ ಮಾಡುವ ಇತಿಮಿತಿ ಇರುತ್ತದೆ. ಅದು ಹೆಚ್ಚಾದರೆ ಒತ್ತಡವಾಗುತ್ತದೆ.

ಕುಮಾರಸ್ವಾಮಿ ಅಂತಹ ಸ್ಥಿತಿ ಎದುರಿಸುತ್ತಿದ್ದಾರೆ ಎಂದರು. ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಮಗ ಕಣ್ಣೀರು ಹಾಕಿರುವ ಬಗ್ಗೆ ಮಾತನಾಡಿರುವ ಕುರಿತು ಪ್ರತಿಕ್ರಿಯಿಸಿದ ಸತೀಶ ಜಾರಕಿಹೊಳಿ, ಒತ್ತಡದಲ್ಲಿ ಕಣ್ಣಲ್ಲಿ ನೀರು ಬಂದಿರಬಹುದು. ಆದರೆ ಅದನ್ನು ಬೇರೆ ರೀತಿಯಿಂದ ವ್ಯಾಖ್ಯಾನ ಮಾಡುವುದು ಸರಿಯಲ್ಲ. ಇದನ್ನೇ ವಿರೋಧ ಪಕ್ಷದವರು ವ್ಯಂಗ್ಯವಾಡುತ್ತಾರೆ. ಅನೇಕ ಸಲ ವಿಪಕ್ಷದವರೂ ಸಹ ಕಣ್ಣೀರು ಹಾಕಿರುವುದನ್ನು ನೋಡಿದ್ದೇವೆ.

ಮುಖ್ಯಮಂತ್ರಿಗಳಿಗೆ ನಾವು ಎಲ್ಲ ರೀತಿಯ ಸಹಕಾರ ನೀಡುತ್ತೇವೆ ಎಂದರು. ಬಜೆಟ್‌ನಲ್ಲಿ ಉತ್ತರ ಕರ್ನಾಟಕ ನಿರ್ಲಕ್ಷé ಮಾಡಲಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಇದರ ಬಗ್ಗೆ ಶ್ವೇತಪತ್ರ ಹೊರಡಿಸಿದರೆ ಎಲ್ಲವೂ ಬಹಿರಂಗವಾಗಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next