Advertisement

ಸಿಎಂ ಮೆಹಬೂಬಾಗೆ ಕರೆ: 130 ತಮಿಳರ ಸುರಕ್ಷಿತ ವಾಪಸಾತಿಗೆ ನೆರವಾಗಿ

05:12 PM May 08, 2018 | Team Udayavani |

ಚೆನ್ನೈ : ಜಮ್ಮು ಕಾಶ್ಮೀರದಲ್ಲಿ ಪ್ರತಿಭಟನಕಾರರ ಕಲ್ಲೆಸೆತಕ್ಕೆ ಗುರಿಯಾಗಿ 22ರ ಹರೆಯದ ತಮಿಳು ನಾಡಿನ ಪ್ರವಾಸಿಗನೋರ್ವ  ಮೃತಪಟ್ಟಿರುವುದನ್ನು ಅನುಸರಿಸಿ, ಕಾಶ್ಮೀರದಲ್ಲಿ ಈಗ ಉಳಿದಿರುವ ಇತರ 130 ಪ್ರವಾಸಿಗರ ಸುರಕ್ಷಿತ ಮರಳುವಿಕೆಗೆ ನೆರವಾಗುವಂತೆ ತಮಿಳು ನಾಡಿನ ಮುಖ್ಯಮಂತ್ರಿ ಕೆ  ಪಳನಿಸ್ವಾಮಿ ಅವರು ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರನ್ನು ಒತ್ತಾಯಿಸಿದ್ದಾರೆ.

Advertisement

ಶ್ರೀನಗರದ ಹೊರವಲಯದಲ್ಲಿನ ನರಬಲ್‌ ಸಮೀಪ ಪ್ರತಿಭಟನಕಾರರು ನಡೆಸಿದ ಕಲ್ಲೆಸೆತದಲ್ಲಿ ಚೆನ್ನೈ ನಿವಾಸಿ ಆರ್‌ ತಿರುಮಣಿಸೆಲ್ವಂ ಎಂಬವರು ತಲೆಗೆ ಗಂಭೀರವಾಗಿ ಗಾಯಗೊಂಡು ಅನಂತರ ಮೃತಪಟ್ಟಿದ್ದರು.

ಜಮ್ಮು ಕಾಶ್ಮೀರದಲ್ಲಿ ಪ್ರಕೃತ ಪ್ರವಾಸಾರ್ಥವಾಗಿ ಉಳಿದಿರುವ ಇನ್ನೂ ಸುಮಾರು 130 ಮಂದಿ ತಮಿಳು ಪ್ರವಾಸಿಗರ ಸುರಕ್ಷಿತ ಮರಳುವಿಕೆಗೆ ನೆರವಾಗುವಂತೆ ತಾನು ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ ಎಂದು ಸಿಎಂ ಪಳನಿಸ್ವಾಮಿ ಅವರು ಅಧಿಕೃತ ಪ್ರಕಟನೆಯಲ್ಲಿ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next