Advertisement

ಕೋವಿಡ್ ನಿಯಂತ್ರಿಸಲು ಅಣ್ಣಮ್ಮದೇವಿ ಮೊರೆ ಹೋದ ಸಿಎಂ ಬಿಎಸ್ ವೈ

08:37 PM May 07, 2021 | Team Udayavani |

ಬೆಂಗಳೂರು : ಕೊರೊನಾ ಎರಡನೇ ಅಲೆಯನ್ನು ನಿಯಂತ್ರಿಸಲು ಗಾಂಧಿನಗರದಲ್ಲಿರುವ ಅಣ್ಣಮ್ಮ ದೇವಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಿಶೇಷ ಪೂಜೆ ಸಲ್ಲಿಸಿದ್ದಾರೆ.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯ ಹಾಗೂ ದೇಶವನ್ನು ಕೊರೊನಾ ಮುಕ್ತವಾಗಿಸಲು ತಾಯಿ ಅಣ್ಣಮ್ಮ ದೇವಿಯ ಆರ್ಶಿವಾದ ಪಡೆದಿದ್ದೇನೆ. ರಾಜ್ಯ ಆದಷ್ಟು ಬೇಗ ಕೊರೊನಾ ಮುಕ್ತವಾಗುವ ವಿಶ್ವಾಸ ಇದೆ ಎಂದರು.

ಜನತಾ ಕರ್ಫ್ಯೂ ಸರಿಯಾಗಿ ಪಾಲನೆಯಾಗುತ್ತಿಲ್ಲ. ಜನರು ಮುಖ್ಯಮಂತ್ರಿಗಳ ಮನೆ ಹಾಗೂ ವಿಧಾನಸೌಧದ ಎದುರು ಬರುವುದು ಸರಿಯಲ್ಲ. ನಾವು ತೊಂದರೆಗೊಳಗಾದವರ ನೆರವಿಗೆ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದೇವೆ. ನಾವು ಜನರ ಪರವಾಗಿರುವರು.

ತಮ್ಮ ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತಂದರೆ, ಅದಕ್ಕೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುತ್ತೇವೆ ಎಂದರು.

ಇದನ್ನೂ ಓದಿ :ಸಂಸದ ತೇಜಸ್ವಿ ಸೂರ್ಯರಿಂದ ಸೌಹರ್ಧತೆಗೆ ಭಂಗ: ಮೊಯಿದಿನ್ ಬಾವ ಆರೋಪ

Advertisement
Advertisement

Udayavani is now on Telegram. Click here to join our channel and stay updated with the latest news.

Next