Advertisement

ಯಡಿಯೂರಪ್ಪ ಒಂದು ಸಮುದಾಯದ ನಾಯಕರಲ್ಲ, ನಾವೆಲ್ಲಾ ಅವರ ಜೊತೆಯಿದ್ದೇವೆ: ಸೋಮಣ್ಣ

05:53 PM May 30, 2020 | keerthan |

ಬೆಂಗಳೂರು: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು  ಒಂದು ಸಮುದಾಯದ ನಾಯಕರಲ್ಲ. ಅವರು ಇಡೀ ಸಮುದಾಯಗಳ ನಾಯಕರು ಎಂದು ಸಚಿವ ವಿ ಸೋಮಣ್ಣ ಹೇಳಿದರು.

Advertisement

ರಾಜ್ಯ ಬಿಜೆಪಿಯಲ್ಲಿ ಬಿಎಸ್ ವೈ ಅವರ ವಿರುದ್ಧ ಅಸಮಧಾನವಿದೆ ಎಂಬ ಮಾತುಗಳು ಕೇಳಿ ಬರುತ್ತಿರುವ ಹಿನ್ನಲೆಯಲ್ಲಿ ಸೋಮಣ್ಣ ಈ ಮಾತುಗಳನ್ನಾಡಿದರು.

ಯಡಿಯೂರಪ್ಪ ವಿರುದ್ಧ ಪಕ್ಷದಲ್ಲಿ ಯಾವುದೇ ಅಸಮಧಾನ ಇಲ್ಲ. ಯಡಿಯೂರಪ್ಪ ಕೋವಿಡ್ ನಿಯಂತ್ರಣ ಉತ್ತಮವಾಗಿ ಮಾಡ್ತಿದ್ದಾರೆ. ಯಡಿಯೂರಪ್ಪ ರಾಜ್ಯದ ಜಾತ್ಯಾತೀತ ನಾಯಕ ಎಂದರು.

ಪಕ್ಷದಲ್ಲಿ ಕೆಲವರಿಗೆ ಅಸಮಧಾನ ಇದ್ದರೆ ಅಪಾರ ಅನುಭವ ಇರುವ ಯಡಿಯೂರಪ್ಪ ಅದನ್ನೆಲ್ಲಾ ಸರಿಪಡಿಸುತ್ತಾರೆ. ನಾವೆಲ್ಲ ಯಡಿಯೂರಪ್ಪ ಜೊತೆ ಇದ್ದೇವೆ ಎಂದು ಸೋಮಣ್ಣ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next