Advertisement

ಬಿಎಸ್‌ವೈ ತವರು ಜಿಲ್ಲೆಗೆ ಬಂಪರ್‌

12:27 AM Jul 23, 2021 | Team Udayavani |

ಬೆಂಗಳೂರು: “ಮುಖ್ಯಮಂತ್ರಿ ಬದಲಾವಣೆ’ ಕುರಿತು ಗರಿಗೆದರಿದ ರಾಜ ಕೀಯ ಬೆಳವಣಿಗೆಗಳ ನಡುವೆಯೇ ಗುರುವಾರ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟದಲ್ಲಿ ಅವರ ತವರು ಶಿವಮೊಗ್ಗಕ್ಕೆ ಬಂಪರ್‌ ಕೊಡುಗೆಗಳು ಸೇರಿದಂತೆ ಹಲವು ಮಹತ್ವದ ತೀರ್ಮಾನ ಗಳನ್ನು ಕೈಗೊಳ್ಳಲಾಯಿತು.

Advertisement

“ಬಿ ಕರಾಬು’ 9.32 ಎಕರೆ ಗೋರಕ್ಷಣಾ ನ್ಯಾಕ್‌ ಸಮಿತಿಗೆ, ಪೆರಿಫೆರಲ್‌ ಕ್ಯಾನ್ಸರ್‌ ಆಸ್ಪತ್ರೆ, ಕರ್ನಾಟಕ ರಾಜ್ಯ ಆಯುಷ್‌ ವಿಶ್ವವಿದ್ಯಾನಿಲಯ ಒಳಗೊಂಡಂತೆ ಶಿವಮೊಗ್ಗಕ್ಕೆ ಹಲವು ಯೋಜನೆಗಳಿಗೆ ಕೊನೆಕ್ಷಣದಲ್ಲಿ ಆಡಳಿತಾತ್ಮಕ ಅನುಮೋದನೆ ಪಡೆದುಕೊಳ್ಳಲಾಯಿತು. ಶಿವಮೊಗ್ಗದ ವೈದ್ಯಕೀಯ ವಿಜ್ಞಾನ ಸಂಸ್ಥೆ ಆವರಣದಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ಕ್ಯಾನ್ಸರ್‌ ಆಸ್ಪತ್ರೆ ಬರಲಿದೆ. ಜತೆಗೆ ಉತ್ತರ ಕನ್ನಡದ ಯಲ್ಲಾಪುರದಲ್ಲಿ ಶೈಕ್ಷಣಿಕ ಮತ್ತು ಪುಷ್ಪಕೃಷಿ ಅಭಿವೃದ್ಧಿಗೆ ವಿಶ್ವ ದರ್ಶನ ಎಜುಕೇಶನ್‌ ಸೊಸೈಟಿಗೆ ಐದು ಎಕರೆ ಸರಕಾರಿ ಜಮೀನು ನೀಡಲು ಮಂಜೂರಾತಿ ನೀಡಲಾಯಿತು.

3 ವರ್ಷಗಳಿಂದ ಯಾವುದೇ ಯೋಜನೆಗಳಡಿ ಒಂದೇ ಒಂದು ಮನೆ ಹಂಚಿಕೆ ಮಾಡಿರಲಿಲ್ಲ. ಈಗ ವಿವಿಧ ವಸತಿ ಯೋಜನೆಗಳಡಿ 5 ಲಕ್ಷ ಮನೆಗಳ ನಿರ್ಮಾಣಕ್ಕೆ ಒಪ್ಪಿಗೆ ಪಡೆಯಲಾಯಿತು. ಇದರಲ್ಲಿ ನಾಲ್ಕು ಲಕ್ಷ ಮನೆಗಳು ಗ್ರಾಮೀಣ ಭಾಗದಲ್ಲಿ ಬರಲಿವೆ.

ಸರಕಾರಿ ನೌಕರರಿಗೆ “ಸಂಜೀವಿನಿ’ :

ಇದೇ ಸಂದರ್ಭದಲ್ಲಿ ರಾಜ್ಯ ಸರಕಾರಿ ನೌಕರರಿಗೆ ತುಟ್ಟಿಭತ್ತೆ ಘೋಷಣೆ ಬೆನ್ನಲ್ಲೇ “ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ’ಯನ್ನು ನೀಡಲಾಯಿತು. ಸಚಿವ ಸಂಪುಟದಲ್ಲಿ ಇದಕ್ಕೆ ಅನುಮೋದನೆ ನೀಡಿದ್ದು, ನೌಕರರು ಮತ್ತು ಅವರ ಕುಟುಂಬಗಳ ಸದಸ್ಯರಿಗೆ ಈ ಯೋಜನೆ ಅನ್ವಯ ಆಗಲಿದೆ.

Advertisement

ಹುಬ್ಬಳ್ಳಿಯಲ್ಲಿ ನಿತ್ಯ 200 ಟನ್‌ ಸಾಮರ್ಥ್ಯದ ತ್ಯಾಜ್ಯದಿಂದ ವಿದ್ಯುತ್‌ ಉತ್ಪಾದಿಸುವ ಸಂಬಂಧದ ಘಟಕಕ್ಕೆ ರಾಷ್ಟ್ರೀಯ ಉಷ್ಣ ವಿದ್ಯುತ್‌ ನಿಗಮ (ಎನ್‌ಟಿಪಿಸಿ)ಕ್ಕೆ ಎರಡು ಎಕರೆ ಮಂಜೂರು ಮಾಡಲಾಗಿದೆ. ಮಹದೇವಪುರದಲ್ಲಿ 180 ಕೋ.ರೂ. ವೆಚ್ಚದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದ್ದು, ಈ ಪೈಕಿ 137 ಕೋಟಿ ರೂ. ಈ ವರ್ಷದಲ್ಲೇ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.  ಸಂಪುಟ ಸಭೆ ನಡೆದ ಸಂದರ್ಭದಲ್ಲೇ ಪೂರಕ ಕಡತಗಳನ್ನು ತರಿಸಿಕೊಂಡು ಹಲವು ಯೋಜನೆಗಳಿಗೆ ಅನುಮೋದನೆ ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next