Advertisement

ಸಿಎಂ ಬಿಎಸ್ ವೈ ಬದಲಾವಣೆ ರಾಜ್ಯದ ಜನತೆ ಸಹಿಸುವುದಿಲ್ಲ: ಶಾಸಕ ಪರಣ್ಣ ಮುನವಳ್ಳಿ

02:27 PM May 27, 2021 | Team Udayavani |

ಗಂಗಾವತಿ: ರಾಜ್ಯದಲ್ಲಿ ಕೊರೊನಾ ಮಹಾಮಾರಿ ವ್ಯಾಪಕವಾಗುತ್ತಿದೆ. ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಅತ್ಯುತ್ತಮ ಕಾರ್ಯ ಮಾಡುತ್ತಿದ್ದಾರೆ ಇಂತಹ ಸಂದರ್ಭದಲ್ಲಿ ಅವರನ್ನು ಬದಲಿಸುವುದನ್ನು ರಾಜ್ಯದ ಜನತೆಗೆ ಸಹಿಸುವುದಿಲ್ಲ ಎಂದು ಶಾಸಕ ಪರಣ್ಣ ಮುನವಳ್ಳಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Advertisement

ಅವರು ತಮ್ನ ಕಚೇರಿಯಲ್ಲಿ ಉದಯವಾಣಿ ಜತೆ ಮಾತನಾಡಿ, ಜನಸಾಮಾನ್ಯರು ಅಸಂಘಟಿತ ವಲಯದ ಬಡವರಿಗಾಗಿ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಕೊರೊನಾ ನಿಯಂತ್ರಣಕ್ಕೆ ಹಗಲು ರಾತ್ರಿ ಸಿಎಂ ಹಾಗೂ ಮಂತ್ರಿಮಂಡಲದ ಸಚಿವರು ಕಾರ್ಯ ಮಾಡುತ್ತಿದ್ದು ಈಗ ಸಿಎಂ ಬದಲಾವಣೆ ಸೂಕ್ತ ಅಲ್ಲ. ಆದ್ದರಿಂದ ಇಂತಹ ಊಹಾಪೋಹಗಳನ್ನು ಜನರು ನಂಬಬಾರದು.

ಪ್ರಧಾನ ಮಂತ್ರಿ ಮೋದಿಯವರು ಗೃಹ ಸಚಿವ ಅಮೀತ್ ಷಾ ಹಾಗೂ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಸೇರಿ ಹಿರಿಯ ನಾಯಕರು ಸೂಕ್ತ ಸಮಯದಲ್ಲಿ ನಿರ್ಣಾಯ ಕೈಗೊಳ್ಳಲಿದ್ದಾರೆ. ಸದ್ಯ ಸಿಎಂ ಬದಲಾವಣೆ ಸೂಕ್ತವಲ್ಲ ಎಂದು ಶಾಸಕ ಮುನವಳ್ಳಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next