Advertisement

ನಿರ್ಮಲಾ ಸೀತಾರಾಮನ್ ನಮ್ಮಿಂದ ಗೆದ್ದು ಹೋದವರು, ಸಹಜವಾಗಿ ನಮಗೂ ನಿರೀಕ್ಷೆಗಳಿವೆ: ಸಿಎಂ

10:55 AM Feb 01, 2022 | Team Udayavani |

ಬೆಂಗಳೂರು: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಮ್ಮಿಂದ ಗೆದ್ದು ಹೋದವರು. ಹೀಗಾಗಿ ಬಜೆಟ್ ಮೇಲೆ ಸಹಜವಾಗಿ ನಮಗೂ ನಿರೀಕ್ಷೆಗಳಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವತ್ತು ಕೇಂದ್ರ ಬಜೆಟ್ ಮಂಡನೆಯಾಗುತ್ತಿದೆ. ಇದು ಕೋವಿಡ್ ನೆರಳಿನಲ್ಲಿ ನಡೆಯುತ್ತಿರುವ ಮ‌ೂರನೇ ಬಜೆಟ್. ಒಂದು ಒಳ್ಳೆಯ ಮುನ್ಸೂಚನೆಯುಳ್ಳ ಬಜೆಟ್ ಆಗುತ್ತೆ ಎಂಬ ಭರವಸೆಯಿದೆ. ಆರ್ಥಿಕ‌ ಬೆಳವಣಿಗೆಗಳಿಗೆ ಪೂರಕವಾಗುವ ಬಜೆಟ್ ಆಗುವ ನಿರೀಕ್ಷೆಯಿದೆ ಎಂದರು.

ಇದನ್ನೂ ಓದಿ:Live Updates: ಕೇಂದ್ರ ಬಜೆಟ್ ಮಂಡನೆ ಆರಂಭ; ಈ ಬಾರಿ ಭರಪೂರ ಕೊಡುಗೆಗಳ ನಿರೀಕ್ಷೆ

ಬಜೆಟ್ ಮೇಲೆ ಕರ್ನಾಟಕದ ನಿರೀಕ್ಷೆಗಳು ಇವೆ. ಕೃಷ್ಣಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಯೋಜನೆ ಮಾನ್ಯತೆ ಘೋಷಣೆ ಬಜೆಟ್ ನ ಭಾಗವಾಗಲ್ಲ. ರಾಷ್ಟ್ರೀಯ ಹೆದ್ದಾರಿ, ರೈಲ್ವೇ ಯೋಜನೆಗಳು, ಉದ್ಯಮಗಳಿಗೆ ಪ್ರೋತ್ಸಾಹ, ಉದ್ಯೋಗ ಸೃಷ್ಟಿಗೆ ಒತ್ತು ಕೊಟ್ಟು ಯೋಜನೆಗಳನ್ನು ಘೋಷಿಸಬಹುದು. ಜಿಎಸ್ ಟಿ ಬಾಕಿ ವಿಚಾರದಲ್ಲಿ ಜಿಎಸ್ ಟಿ ಕೌನ್ಸಿಲ್ ತೀರ್ಮಾನಿಸುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next