Advertisement

ಐಟಿ  ಪ್ರಮುಖರ ಜತೆ ಸಿಎಂ ಬೊಮ್ಮಾಯಿ ಚರ್ಚೆ

11:19 PM Aug 08, 2021 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರವಿವಾರ ನಗರದ ಪ್ರಮುಖ ಐಟಿ ಸಂಸ್ಥೆಗಳ ಮುಖ್ಯಸ್ಥರ ಜತೆಗೆ ಹಲವು ಮಹತ್ವದ ವಿಚಾರಗಳ ಬಗ್ಗೆ ಚರ್ಚಿಸಿದರು.

Advertisement

ಬಯೋಕಾನ್‌ ಸಂಸ್ಥೆಯ ಅಧ್ಯಕ್ಷೆ ಕಿರಣ್‌ ಮುಜುಂದಾರ್‌ ಷಾ ಬೆಂಗಳೂರಿನ ದಿ ಒಬೆರಾಯ್‌ ಹೊಟೇಲ್‌ನಲ್ಲಿ ಆಯೋಜಿಸಿದ್ದ ಭೋಜನ ಕೂಟದಲ್ಲಿ ಪಾಲ್ಗೊಂಡ ವಿಪ್ರೋ ಅಧ್ಯಕ್ಷ ಅಜೀಮ್‌ ಪ್ರೇಮ್‌ ಜಿ, ಮೋಹನ್‌ದಾಸ್‌ ಪೈ, ಕ್ರಿಸ್‌ ಗೋಪಾಲಕೃಷ್ಣನ್‌ ಹಾಗೂ ಐಟಿ ದಿಗ್ಗಜ ಸಂಸ್ಥೆಗಳ ಪ್ರಮುಖರು, ಹಲವು ಗಂಭೀರ ವಿಚಾರಗಳ ಕುರಿತು ಸಮಾಲೋಚನೆ ನಡೆಸಿದ್ದಾರೆ.

ಸಹಾಯ ಚಿಂತನೆ:

ಕೊರೊನಾ ಹಿನ್ನೆಲೆಯಲ್ಲಿ ಕೆಲಸ ಕಾರ್ಯ ಸ್ಥಗಿತವಾಗಿದ್ದರಿಂದ  ಸಾಕಷ್ಟು ಮಾಹಿತಿ ತಂತ್ರಜ್ಞಾನ ಸಂಸ್ಥೆಗಳು ಆರ್ಥಿಕ ಕಷ್ಟಕ್ಕೆ ಒಳಗಾಗಿವೆ. ಇದರ ನಡುವೆಯೂ ಒಂದಿಷ್ಟು ಹೊಸ ಸ್ಟಾರ್ಟ್‌ಅಪ್‌ ಕಂಪೆನಿಗಳು ಕಾರ್ಯಾರಂಭ ಮಾಡಲು ಸಿದ್ಧತೆ ನಡೆಸುತ್ತಿವೆ. ಇವುಗಳಿಗೆ ಸರಕಾರದಿಂದ  ನೀಡಬಹುದಾದ ಸಹಕಾರಗಳ ಕುರಿತು ಚರ್ಚಿಸಲಾಗಿದೆ.

ಮೂರು ಗಂಟೆ  ಚರ್ಚೆ:

Advertisement

ನಿರಂತರ ಮೂರು ಗಂಟೆಗಳ ಕಾಲ ಈ ಭೋಜನ ಕೂಟದಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ  ಮುಂಬರುವ ದಿನಗಳಲ್ಲಿ ಸರ್ಕಾರ ಕೈಗೊಳ್ಳಬಹುದಾದ ಯೋಜನೆಗಳ ರೂಪುರೇಷೆ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next