Advertisement

ವಿಜಯಪುರ ಪಾಲಿಕೆಯಿಂದ ರಸ್ತೆ ಒತ್ತುವರಿ ಅಂಗಡಿಗಳ ತೆರವು

08:58 AM Aug 09, 2021 | Team Udayavani |

ವಿಜಯಪುರ: ನಗರದಲ್ಲಿ ರಸ್ತೆ ಒತ್ತುವರಿ ಮಾಡಿಕೊಂಡಿದ್ದ ಅಕ್ರಮ ಕಟ್ಟಡ ತೆರವು ಕಾರ್ಯಕ್ಕೆ ಸೋಮವಾರ ಬೆಳ್ಳಂಬೆಳಿಗ್ಗೆ ಮಹಾನಗರ ಪಾಲಿಕೆ ಕಾರ್ಯಾಚರಣೆ ಆರಂಭಿಸಿದೆ.

Advertisement

ನಗರದ‌ ಸರಾಫ್ ಬಜಾರ ಪರಿಸರದ ರಸ್ತೆಗಳಲ್ಲಿ ಅನಧಿಕೃತವಾಗಿ ತೆರೆದಿದ್ದ ತಳ್ಳುವ ಗಾಡಿಗಳು, ರಸ್ತೆ ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ನಿರ್ಮಾಣ ಮಾಡಿದ್ದ ಅಂಗಡಿಗಳ ತೆರವು ಮಾಡಿದರು.

ಶಟರ್ ಹಾಕಿ ನಿರ್ಮಿಸಿದ್ದ ಸುಮಾರು‌ 30 ಕ್ಕೂ ಅಧಿಕ ಅಂಗಡಿಗಳನ್ನು ಜೆಸಿಬಿ ಯಂತ್ರ ಬಳಸಿ ಮಹಾನಗರ ಪಾಲಿಕೆ ಅಧಿಕಾರಿ-ಸಿಬ್ಬಂದಿ ತೆರವು ಮಾಡಿದರು.

ಇದನ್ನೂ ಓದಿ:ರಸ್ತೆ ಬದಿಯ ಗುಡಿಸಲುಗಳ ಮೇಲೆರಗಿದ ಯಮರೂಪಿ ಟ್ರಕ್: 8 ಮಂದಿ ಸಾವು

ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ್ ಮೆಕ್ಕಳಕಿ ನೇತೃತ್ವದಲ್ಲಿ ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ ನಡೆಸಿದರು.

Advertisement

ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳದಲ್ಲಿ ಎಎಸ್ಪಿ ರಾಮ‌ ಅರಸಿದ್ಧಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next