Advertisement

ಹಳೆದಾಂಡೇಲಿಯಲ್ಲಿ ರಸ್ತೆಗೆ ನಿರ್ಮಿಸಲಾದ ತಡೆಗೋಡೆ ತೆರವು- ನಿಟ್ಟುಸಿರು ಬಿಟ್ಟ ಸ್ಥಳೀಯರು

12:34 PM Dec 22, 2021 | Team Udayavani |

ದಾಂಡೇಲಿ: ಹಳೆದಾಂಡೇಲಿಯ ಸ್ವಾಮಿಲ್ ಹತ್ತಿರದ ರಸ್ತೆಗೆ ಅಡ್ಡಲಾಗಿ ಅರಣ್ಯ ಇಲಾಖೆಯವರು ತಡೆಗೋಡೆ ನಿರ್ಮಿಸಿ ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿದ್ದರು. ಶತಮಾನಗಳಿಂದ ಸ್ಥಳೀಯ ಜನತೆಯ ದೈನಂದಿನ ಜೀವನದ ಪ್ರಮುಖ ಕೊಂಡಿಯಾಗಿದ್ದ ಈ ರಸ್ತೆಗೆ ಏಕಾಏಕಿ ಅರಣ್ಯ ಇಲಾಖೆಯವರು ತಡೆಗೋಡೆಯನ್ನು ನಿರ್ಮಿಸುವುದರ ಮೂಲಕ ಸ್ಥಳೀಯರ ಪ್ರತಿಭಟನೆಗೆ, ಆಕ್ರೋಶಕ್ಕೆ ತುತ್ತಾಗಿದ್ದರು.

Advertisement

ತಡೆಗೋಡೆ ತೆರವುಗೊಳಿಸುವಂತೆ ಸ್ಥಳೀಯರು ಪ್ರತಿಭಟನೆಯನ್ನು ನಡೆಸಿದ್ದರು. ಇತ್ತ ಪೌರಾಯುಕ್ತರು ತೆರವಿಗಾಗಿ ನಗರ ಸಭೆಯಿಂದ ಪತ್ರ ಬರೆದು ತಿಳಿಸಿದ್ದರು. ತೆರವುಗೊಳಿಸದೇ ಇದ್ದಲ್ಲಿ ಬೃಹತ್ ಪ್ರತಿಭಟನೆಗೂ ಸ್ಥಳೀಯರು ನಿರ್ಧರಿಸಿದ್ದರು. ಈ ನಡುವೆ ಇದೀಗ ರಸ್ತೆಗೆ ನಿರ್ಮಿಸಲಾದ ತಡೆಗೋಡೆಯನ್ನು ತೆರವುಗೊಳಿಸಲಾಗಿದೆ.

ಈ ಹಿನ್ನಲೆಯಲ್ಲಿ ಪ್ರತಿಭಟನೆಯನ್ನು ಸಹ ಸ್ಥಳೀಯರು ಕೈ ಬಿಟ್ಟಿದ್ದಾರೆಂದು ತಿಳಿದು ಬಂದಿದೆ. ಬಹಳಷ್ಟು ವರ್ಷಗಳಿಂದ ಈ ರಸ್ತೆಯನ್ನೆ ಅವಲಂಭಿಸಿದ್ದ ಸ್ಥಳೀಯರಿಗೆ ಇದೀಗ ತಡೆಗೋಡೆ ತೆರವು ನೆಮ್ಮದಿಯನ್ನು ತಂದೊಡ್ಡಿದೆ. ತಡೆಗೋಡೆ ತೆರವುಗೊಳಿಸಿದ ನಂತರ ಸ್ಥಳೀಯರಿಗೆ ಅರಣ್ಯ ಇಲಾಖೆಯ ಮೇಲಿದ್ದ ಆಕ್ರೋಶ ಕ್ಷೀಣಗೊಂಡಿದೆ.

ಒಟ್ಟಿನಲ್ಲಿ ಸ್ಥಳೀಯರ ದೈನಂದಿನ ಬದುಕಿಗೆ ತೊಂದರೆಯಾಗದಿರಲೆಂದು ತಡೆಗೋಡೆ ತೆರವುಗೊಳಿಸಲಾಗಿದೆ ಎಂಬ ಮಾತುಗಳು ನಗರದಲ್ಲಿ ಕೇಳಿಬರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next