Advertisement

ಕಸ ಗುಡಿಸಿ ಸ್ವಚ್ಛ ಶನಿವಾರ ಆಚರಣೆ

04:36 PM Mar 22, 2020 | Suhan S |

ಕೆಜಿಎಫ್: ನಗರದಲ್ಲಿ ಸ್ವಚ್ಛ ಶನಿವಾರ ಆಂದೋಲನದ ಅಂಗವಾಗಿ ನಗರಸಭೆ ಆಯುಕ್ತ ಸಿ.ರಾಜು, ಅಧಿಕಾರಿಗಳು ಮತ್ತು ಸಿಬ್ಬಂದಿ ಶ್ರಮದಾನ ಮಾಡಿ ರಸ್ತೆಯಲ್ಲಿನ ಕಸ ತೆರವು ಮಾಡಿದರು. ಪ್ರಧಾನಿ ನರೇಂದ್ರ ಮೋದಿ ಭಾನುವಾರ ಜನತಾ ಕರ್ಫ್ಯೂ ಆಚರಣೆಗೆ ಕರೆ ನೀಡಿರುವುದರಿಂದ ನಗರದಲ್ಲಿ ಗ್ರಾಹಕರು ಬಿರುಸಿನಿಂದ ಮನೆಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿ ಮಾಡಿದರು. ನಗರದ ಎಂ.ಜಿ.ಮಾರುಕಟ್ಟೆಯಲ್ಲಿರುವ 1500 ಅಂಗಡಿಗಳಲ್ಲಿ ಜನ ದಟ್ಟಣೆ ಇತ್ತು. ತಿಂಡಿ ತಿನಿಸುಗಳು, ತರಕಾರಿ, ಹಣ್ಣು ಹಂಪಲು, ಮಾಂಸ ಮೊದಲಾದ ಖಾದ್ಯಗಳಿಗೆ ಹೆಚ್ಚಿನ ಬೇಡಿಕೆ ಕಂಡು ಬಂದಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next