Advertisement

ಸಿಜೆ ದಿನೇಶ್‌ ಮಾಹೇಶ್ವರಿ ಸುಪ್ರೀಂ ಕೋರ್ಟ್‌ಗೆ ಭಡ್ತಿ

12:30 AM Jan 17, 2019 | Team Udayavani |

ಹೊಸದಿಲ್ಲಿ: ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾ| ದಿನೇಶ್‌ ಮಾಹೇಶ್ವರಿ ಮತ್ತು ದಿಲ್ಲಿ ಹೈಕೋರ್ಟ್‌ನ ನ್ಯಾ| ಸಂಜೀವ್‌ ಖನ್ನಾರನ್ನು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾಗಿ ನೇಮಕದ ಶಿಫಾರಸಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಸಮ್ಮತಿ ಸೂಚಿಸಿದ್ದಾರೆ.

Advertisement

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾ| ರಂಜನ್‌ ಗೊಗೊಯ್‌ ನೇತೃತ್ವದ ಉನ್ನತಾಧಿಕಾರದ ನ್ಯಾಯಮೂರ್ತಿಗಳ ಸಮಿತಿ ದಿಲ್ಲಿ ಹೈಕೋರ್ಟ್‌ನ ಮುಖ್ಯ ನ್ಯಾ| ರಾಜೇಂದ್ರ ಮೆನನ್‌, ರಾಜಸ್ಥಾನ ಹೈಕೋರ್ಟ್‌ನ ಮುಖ್ಯ ನ್ಯಾ| ಪ್ರದೀಪ್‌ ನಂದರಾಜ್‌ಗಾಂವ್‌ರ ಪದೋನ್ನತಿಗೆ ಶಿಫಾರಸು ಮಾಡಿತ್ತು. ಜ.11ರಂದು ನಡೆದಿದ್ದ ಸಭೆಯಲ್ಲಿ ಸಮಿತಿ ನಿಲುವು ಬದಲಾಯಿಸಿ ನ್ಯಾ| ಮಾಹೇಶ್ವರಿ ಮತ್ತು ನ್ಯಾ| ಖನ್ನಾರನ್ನು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ಹುದ್ದೆಗೆ ಶಿಫಾರಸು ಮಾಡಿತ್ತು. ಈ ನೇಮಕದ ಬಗ್ಗೆ ನ್ಯಾಯಾಂಗದಲ್ಲಿ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಜತೆಗೆ ರಾಷ್ಟ್ರಪತಿಯವರಿಗೂ ಪತ್ರ ಬರೆದಿದ್ದರು. ವಕೀಲರ ಪರಮೋಚ್ಚ ಸಂಸ್ಥೆ ಬಾರ್‌ ಕೌನ್ಸಿಲ್‌ ಆಫ್ ಇಂಡಿಯಾ ಕೂಡ ಶಿಫಾರಸಿನ ಬಗ್ಗೆ ಆಕ್ಷೇಪ ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next