Advertisement

ತ್ರಾಲ್‌ ಗ್ರೆನೇಡ್‌ ದಾಳಿ: ಮೂರಕ್ಕೇರಿದ ಮೃತರ ಸಂಖ್ಯೆ

03:49 PM Sep 27, 2017 | Team Udayavani |

ಶ್ರೀನಗರ : ಪುಲ್ವಾಮಾ ಜಿಲ್ಲೆಯ ತ್ರಾಲ್‌ ಪ್ರದೇಶದಲ್ಲಿ  ಕಳೆದ ಸೆ.21ರಂದು ಕಾಮಗಾರಿ ಸಚಿವ ನಯೀಮ್‌ ಅಖ್‌ತರ್‌ ಅವರನ್ನು ಗುರಿ ಇರಿಸಿ ನಡೆದಿದ್ದ  ದಾಳಿಯಲ್ಲಿ ಸಂಭವಿಸಿದ್ದ  ಗ್ರೆನೇಡ್‌ ಸ್ಫೋಟದಲ್ಲಿ  ಗಾಯಗೊಂಡಿದ್ದ ಪೌರರೊಬ್ಬರು ಅಸು ನೀಗುವುದರೊಂದಿಗೆ ಈ ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 3ಕ್ಕೇರಿತು. 

Advertisement

ಸೆ.21ರಂದು ತ್ರಾಲ್‌ ಪ್ರದೇಶದಲ್ಲಿ ಗ್ರೆನೇಡ್‌ ಸ್ಫೋಟಗೊಂಡಿತ್ತು. ಗಾಯಾಳುವಾಗಿದ್ದ ಮುಷ್ತಾಕ್‌ ಅಹ್ಮದ್‌ ಶೇಖ್‌ ಎಂಬವರು ಸ್ಕಿಮ್ಸ್‌ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಅವರು ಕೊನೆಯುಸಿರೆಳೆದರು ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ಸೆ.21 ಗ್ರೆನೇಡ್‌ ದಾಳಿಯಲ್ಲಿ ಸಚಿವ ನಯೀಮ್‌ ಅಖ್‌ತರ್‌ ಅವರು ಪಾರಾಗಿದ್ದರು. ಆದರೆ ಇಬ್ಬರು ಮೃತಪಟ್ಟು ಇತರ 34 ಮಂದಿ ಗಾಯಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next