Advertisement

ಆರೋಗ್ಯ ಯೋಧರು: ಪಟಿಯಾಲಾದಲ್ಲಿ ನೈರ್ಮಲ್ಯ ಕಾರ್ಮಿಕರಿಗೆ ನೋಟಿನ ಹಾರ

07:56 PM Apr 03, 2020 | Hari Prasad |

ಕೋವಿಡ್ 19 ವೈರಸ್ ಗೆ ಹೆದರಿ ದೇಶಕ್ಕೆ ದೇಶವೇ ಲಾಕ್‌ ಡೌನ್‌ ಆಗಿದ್ದರೂ, ಪ್ರತಿ ದಿನ ಬೆಳಗ್ಗೆ ನಿಮ್ಮ ಮನೆ ಬಾಗಿಲಿಗೆ ಬಂದು ತ್ಯಾಜ್ಯಗಳನ್ನು ಸಂಗ್ರಹಿಸುವ ನೈರ್ಮಲ್ಯ ಕಾರ್ಮಿಕರ ಬಗ್ಗೆ ಯೋಚಿಸಿದ್ದೀರಾ?

Advertisement

ಹೇಗೆ ವೈದ್ಯರು, ನರ್ಸ್‌ಗಳು, ಪೊಲೀಸರು ತಮ್ಮ ಜೀವವನ್ನು ಪಣಕ್ಕಿಟ್ಟು ಕರ್ತವ್ಯನಿಷ್ಠೆ ಮೆರೆಯುತ್ತಿದ್ದಾರೋ ಅದೇ ರೀತಿ ನೈರ್ಮಲ್ಯ ಕಾರ್ಮಿಕರು ಕೂಡ ಇಂಥ ಸಂಕಷ್ಟದ ಸಂದರ್ಭದ ಹೀರೋಗಳೇ ಆಗಿದ್ದಾರೆ.

ಅವರು ಮಾಸ್ಕ್, ಗ್ಲೌಸ್‌ ಧರಿಸಿಕೊಂಡು ಬೆಳಗ್ಗೆ ಮನೆ ಮನೆಗೆ ತೆರಳಿ ತ್ಯಾಜ್ಯ ಸಂಗ್ರಹಿಸದೇ ಇರುತ್ತಿದ್ದರೆ, ಮನೆಗಳಲ್ಲಿ ತುಂಬಿರುವ ತ್ಯಾಜ್ಯದ ವಿಲೇವಾರಿಯೇ ಎಲ್ಲರಿಗೂ ದೊಡ್ಡ ಸವಾಲಾಗಿ ಪರಿಣಮಿಸುತ್ತಿತ್ತು.

ಇದನ್ನು ಅರಿತುಕೊಂಡ ಪಂಜಾಬ್‌ ನ ಪಟಿಯಾಲಾದ ನಾಗರಿಕರು ಏನು ಮಾಡಿದ್ದಾರೆ ಗೊತ್ತಾ? ಇತ್ತೀಚೆಗೆ ನೈರ್ಮಲ್ಯ ಕಾರ್ಮಿಕರು ತಮ್ಮ ಕಾಲೊನಿಗೆ ಬಂದಾಗ, ಅವರಿಗೆ ಕರೆನ್ಸಿ ನೋಟುಗಳ ಮಾಲೆ ಹಾಕಿ, ಚಪ್ಪಾಳೆ ತಟ್ಟುವ ಮೂಲಕ ಸನ್ಮಾನಿಸಿದ್ದಾರೆ. ಈ ಮೂಲಕ ಅವರ ನಿಸ್ವಾರ್ಥ ಸೇವೆಗೆ ಧನ್ಯವಾದ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next