Advertisement

ಚಿಕ್ಕೋಡಿಯಲ್ಲಿ ಸಿನಿಮೀಯ ಘಟನೆ: ಕೊಲ್ಲಲು ಬಂದವ ಹೆಣವಾದ 

12:31 PM Nov 09, 2017 | |

ಚಿಕ್ಕೋಡಿ: ಬೆಳಗಾವಿಯಲ್ಲಿ ನಡೆದ ಸಿನಿಮೀಯ ಘಟನೆಯೊಂದರಲ್ಲಿ ಮಹಿಳೆಯನ್ನು ಕೊಲ್ಲುವ ಸಂಚಿನೊಂದಿಗೆ ಬಂದಿದ್ದ ವ್ಯಕ್ತಿ ಪಾಳು ಬಾವಿಯಲ್ಲಿ ಬಿದ್ದು ಹೆಣವಾಗಿದ್ದು, 130 ಅಡಿ ಆಳದ ಬಾವಿಗೆ ಬಿದ್ದರೂ ಮಹಿಳೆ ಅದೃಷ್ಟವಷಾತ್‌ ಬುದುಕಿ ಉಳಿದಿದ್ದಾಳೆ. 

Advertisement

ನವೆಂಬರ್‌ 7 ರಂದು ರಾತ್ರಿ  ಮೀರಾಪುರ ಹಟ್ಟಿಯಲ್ಲಿ ಘಟನೆ ನಡೆದಿದ್ದು,ಲಕ್ಕಪ್ಪ ಅರಮಾನ ಎನ್ನುವಾತ ಬೈಕ್‌ನಲ್ಲಿ ಬಂದು ತನ್ನ ಪರಿಚಯಸ್ಥಳೇ ಆಗಿರುವ ಅಕ್ಕವ್ವ ಖೋತಾ ರನ್ನು ಮೆಕ್ಕಜೋಳ ಕಟಾವು ಮಾಡಲೆಂದು ಕೆರೆದುಕೊಂಡು ಹೋಗಿದ್ದಾನೆ. 

ಪಾಳು ಬಾವಿಯೊಂದರ ಬಳಿ ತೆರಳಿ ಅಕವ್ವನೊಂದಿಗೆ ಕೆಲ ಕಾಲ ಜಗಳವಾಡಿದ್ದು,ಬಳಿಕ ಆಕೆಯನ್ನು ತಳ್ಳಿ ತಾನು ಪರಾರಿಯಾಗಲು ಮುಂದಾಗಿದ್ದಾನೆ. ಯತ್ನದಲ್ಲಿ ಲಕ್ಕಪ್ಪ ಮೊದಲು ಬಾವಿಗೆ ಬಿದ್ದು ಮೈಮೇಲೆಯೇ ಬೈಕ್‌ ಬಿದ್ದು ದಾರುಣವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಅಕ್ಕವ್ವ 130 ಅಡಿ ಆಳದ ಬಾವಿಗೆ ಬಿದ್ದರೂ ಅದೃಷ್ಟವಷಾತ್‌ ಪಾರಾಗಿದ್ದು ಪೊಲೀಸರು, ಅಗ್ನಿ ಶಾಮಕ ದಳದ ಸಿಬಂದಿಗಳು ಮತ್ತು ಸ್ಥಳೀಯರು ತಡರಾತ್ರಿ 1 ಗಂಟೆಯ ವೇಳೆಗೆ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. 

ಜಿಲ್ಲಾಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಲಕ್ಕವ್ವ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ‘ನನ್ನನ್ನು ಕೊಲ್ಲುವ ಸಂಚಿನೊಂದಿಗೆ ಕೃತ್ಯ ಎಸಗಿದ್ದ’ ಎಂದಿ ದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next